ನವೀ ಮುಂಬಯಿ (ಮರಾಠಿ: नवी मुंबई, ಭಾರತದ ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಕರಾವಳಿ ನಗರವಾಗಿದೆ. ಇದು ೧೯೭೨ರಲ್ಲಿ ಮುಂಬಯಿ ನಗರದ ಅವಳಿ ನಗರವಾಗಿ ಅಭಿವೃದ್ಧಿ ಹೊಂದಿತು, ಮತ್ತು ಜಗತ್ತಿನ ಅತಿ ದೊಡ್ಡ ಯೋಜನಾಬದ್ಧ ನಗರ, ಒಟ್ಟು ಪ್ರದೇಶ ೩೪೪ಕಿಮೀ² ಮತ್ತು ೧೬೩ ಕಿಮೀ² ಹೊಸ ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (ಎನ್‌ಎಂಎಂಸಿ) ಯ ಕಾನೂನಿನ ಅಧಿಕಾರ ವ್ಯಾಪ್ತಿಯಡಿಯಲ್ಲಿ ಬರುತ್ತದೆ. ಹೊಸ ಮುಂಬಯಿ ಠಾಣೆ ಕೊಲ್ಲಿಯ ಪೂರ್ವ ಕರಾವಳಿಯ ಮುಖ್ಯ ಭೂಮಿಯಲ್ಲಿ ಚಾಚಿಕೊಂಡಿದೆ. ನಗರದ ಗಡಿಯು ಉತ್ತರದಲ್ಲಿ ಠಾಣೆ ಸಮೀಪದ ಐರೋಳಿಯಿಂದ,ದಕ್ಷಿಣದಲ್ಲಿ ಉರಣ್ ವರೆಗೆ ವಿಸ್ತರಿಸಿದೆ . ನಗರದ ಉದ್ದ ಮುಂಬಯಿಗೆ ಅತಿಸಮೀಪವಾಗಿದೆ. ವಾಶಿ ಮತ್ತು ಐರೋಲಿ ಸೇತುವೆ ನವೀ ಮುಂಬಯಿಯಿಂದ ಮುಂಬಯಿಗೆ ಸಂಪರ್ಕ ಕಲ್ಪಿಸುತ್ತದೆ. ನೆರೂಳ್ ಮತ್ತು ಉರಣ್ ನಡುವಿನ ಹೊಸ ಸಂಪರ್ಕ ನಿರ್ಮಾಣದ ಹಂತದಲ್ಲಿದೆ. ನವೀ ಮುಂಬಯಿಯ ವಾಶಿ ಮತ್ತು ನೆರೂಳ್ ಅತಿ ದುಬಾರಿಯಾದ ಮತ್ತು ಅಭಿವೃದ್ಧಿ ಹೊಂದಿದ ಪ್ರದೇಶಗಳಾಗಿವೆ. ಪರಿಣಾಮವಾಗಿ, ನೆರೂಳನ್ನು ನವೀ ಮುಂಬಯಿಯ ರಾಣಿ ಎಂದು ಪರಿಗಣಿಸಿದಾಗ, ವಾಶಿಯನ್ನು ನವೀ ಮುಂಬಯಿಯ ರಾಜ ಎನ್ನಲಾಗಿದೆ. ನವೀ ಮುಂಬಯಿಯ ಜನಸಂಖ್ಯೆ ೨,೬೦೦,೦೦೦ ನೆರೂಳ್ ನಿಂದ ೮೦೦,೦೦೦ ಮತ್ತು ವಾಶಿಯಿಂದ ಸುಮಾರು ೭೦೦,೦೦೦ ಉಳಿದದ್ದು ಬೆಲಾಪೂರ್, ಸಾನ್ ಪಾಡಾ, ಐರೋಳಿ, ಘನಸೋಲಿ, ಕೋಪರಕೈರಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಅಂದಾಜಿಸಲಾಗಿದೆ. ನವೀ ಮುಂಬಯಿ ಮುಂಬಯಿ ಕನುರ್ಬೆಶನ್ ಭಾಗವಾಗಿದೆ. ಎನ್‌ಎಂಎಂಸಿ ಏಷ್ಯಾದ ಅತಿ ಶ್ರೀಮಂತ ನಗರಸಭೆ ಎಂಬ ಸ್ಥಾನ ದೊರಕಿದೆ. ನವೀ ಮುಂಬಯಿ ಮಾತ್ರ ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್‌ನ ಸೂಪರ್ ಸಿಟಿ ಆಫ್ ದ ವರ್ಲ್ಡ್ ನಲ್ಲಿ ಪ್ರಾಧಾನ್ಯ ಪಡೆದ ಭಾರತದ ನಗರವಾಗಿದೆ. == ಇತಿಹಾಸ == ನವೀ ಮುಂಬಯಿ ಜಗತ್ತಿನ ದೊಡ್ಡ ಯೋಜನಾಬದ್ಧ ನಗರವಾಗಿದೆ. ಇದನ್ನು ಮೊದಲಿಗೆ ನಿರ್ದಿಷ್ಟವಾದ ಉದ್ದೇಶಕ್ಕೆ ಯೋಜಿಸಲಾಗಿತ್ತು: ಭಾರತದ ವಿವಿಧ ಭಾಗದಿಂದ ಬಂದ ಬಹುಸಂಖ್ಯೆಯ ಜನಸಂದಣಿಯ ಮುಂಬಯಿಗೆ ಬರಲಾಗಿ ಮುಂಬಯಿಯ ಅತಿ ಜನಸಂದಣಿ ಕಡಿಮೆ ಮಾಡುವುದು. ಇಂದು, ನವೀ ಮುಂಬಯಿ ಎಲ್ಲ ರೀತಿಯಲ್ಲಿಯೂ ಮುಂಬಯಿಗೆ ಸಮೀಪದ ಸ್ಪರ್ಧಿಯಾಗಿದೆ. === ಯೋಜಿತ ನಗರ === ಸ್ವಾತಂತ್ರ್ಯ ನಂತರದ ಮುಂಬಯಿಗೆ ಮೊದಲ ಅಭಿವೃದ್ದಿ ಯೋಜನೆ, ೧೯೪೮ರಲ್ಲಿ ಮೇಯರ್-ಮೋಡಕ್ ಕಮಿಟಿಯಿಂದ ರೂಪಿಸಲ್ಪಟ್ಟಿತು, ಉಪನಗರಕ್ಕಾಗಿ ಸಲಹೆ ನೀಡಿತು. ಹತ್ತು ವರ್ಷದ ನಂತರ ೧೯೫೮ರಲ್ಲಿ,ಗ್ರೇಟರ್ ಬಾಂಬೆ ಮೇಲೆ ಮಿಸ್ಟರ್ ಎಸ್.ಜಿ.ಬರ್ವೆ ಅಧ್ಯಕ್ಷತೆಯಲ್ಲಿ ಅಧ್ಯಯನ ತಂಡ ರೂಪಿಸಲಾಯಿತು. ೧೯೫೯ರ ಫೆಬ್ರವರಿಯಲ್ಲಿ, ಮುಂಬಯಿಯಲ್ಲಿನ ಜನದಟ್ಟಣೆ ಕಡಿಮೆ ಮಾಡಲು ಠಾಣೆ ಕೊಲ್ಲಿಯ ಮುಖ್ಯಭೂಮಿಗೆ ಅಡ್ಡವಾಗಿ ಪಟ್ಟಣ ರೂಪಿಸಲು ಕಮಿಟಿ ಸಲಹೆ ನೀಡಿತು. ಇದರ ಒಂದು ಮುಖ್ಯ ಶಿಫಾರಸು ಎನೆಂದರೆ ಠಾಣೆ ಕೊಲ್ಲಿಗೆ ಅಡ್ಡವಾಗಿ ಪರ್ಯಾಯ ಮುಂಬಯಿಯ ಮುಖ್ಯ ಭೂಮಿಗೆ ಸಂಪರ್ಕ ಕಲ್ಪಿಸಲು ರೈಲುಹಳಿ ಸೇತುವೆಯನ್ನು ನಿರ್ಮಾಣ ಮಾಡಲು ಹೇಳಿತು. ಕೊಲ್ಲಿಗೆ ಸೇತುವೆಯನ್ನು ತ್ವರಿತವಾಗಿ ಅಭಿವೃದ್ಧಿಗೊಳಿಸಲಾಯಿತು, ನಗರದ ರೈಲುಗಳಿಗೆ ಮತ್ತು ರಸ್ತೆಸಾರಿಗೆ ಮೇಲಿನ ಒತ್ತಡವನ್ನು ಕಡಿಮೆ ಮಾಡಿತು,ಮತ್ತು ಕೈಗಾರಿಕಾ ಮತ್ತು ವಸತಿಗೃಹಗಳು ಪೂರ್ವದ ಮುಖ್ಯಭೂಮಿ ಮೇಲೆ ಕೇಂದ್ರಿಕರಿಸಿದವು. ೧೯೬೪ ಜುಲೈನಲ್ಲಿ ಮಹಾರಾಷ್ಟ್ರ ಸರ್ಕಾರ ಬರ್ವೆ ತಂಡದ ಶಿಫಾರಸನ್ನು ಅಂಗೀಕರಿಸಿತು. ಪ್ರೊಫೆಸರ್ ಡಿ.ಆರ್. ಗಾಡ್ಗೀಳ್ ಹೊಸ ಕಮಿಟಿಯ ಅಧಿಕಾರ ವಹಿಸಿಕೊಂಡರು, ನಂತರ ೧೯೬೫ ಮಾರ್ಚ್‌ನಲ್ಲಿ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಆ‍ಯ್‌೦ಡ್ ಇಕನಾಮಿಕ್ಸ್‌ನ ನಿರ್ದೇಶಕ,ಪ್ರಾದೇಶಿಕ ಯೋಜನೆಯ ವಿಶಾಲ ತತ್ವಗಳನ್ನು ರೂಪಿಸಲು ಗಾಡ್ಗೀಳ್ ಕಮಿಟಿ ಬಂದರಿಗೆ ಅಡ್ಡವಾಗಿ ಹೊಸ ನಗರ ಸ್ಥಾಪಿಸಲು ಬಲವಾಗಿ ಶಿಫಾರಸು ಮಾಡಿತು. ೧೯೬೬ರ ಮಾರ್ಚ್‌ನಲ್ಲಿ, ಗಾಡ್ಗೀಳ್ ಕಮಿಟಿಯು ಪ್ರಾದೇಶಿಕ ಯೋಜನೆ ಶಾಸನ ಮತ್ತು ಪ್ರಾದೇಶಿಕ ಯೋಜನಾ ಬೋರ್ಡ್‌ಗೆ ಶಿಫಾರಸು ಮಾಡಿತು. ೧೯೬೭ರ ಜನವರಿಯಲ್ಲಿ, ಮಹಾರಾಷ್ಟ್ರ ಪ್ರಾದೇಶಿಕ ಮತ್ತು ನಗರ ಯೋಜನಾ ಕಾಯಿದೆ‌ ೧೯೬೬ ಅಂಗೀಕರಿಸಿತು. ೧೯೬೭ರ ಜುಲೈನಲ್ಲಿ ಐಸಿಎಸ್ ಆಫೀಸರ್ ಎಲ್.ಜಿ.ರಾಜವಾಡೆ ಅಧ್ಯಕ್ಷತೆಯಲ್ಲಿ ಬಾಂಬೆ ಮೆಟ್ರೋಪಾಲಿಟನ್ ಮತ್ತು ಪ್ರಾದೇಶಿಕ ಯೋಜನಾ ಬೋರ್ಡ್ ರಚನೆ ಮಾಡಲಾಯಿತು. ಕಮಿಟಿ ಕೊಲ್ಲಿಯ ಮೇಲೆ ನ್ಯೂ ಬಾಂಬೆ ಅಥವಾ ಹೊಸ ಮೆಟ್ರೋ-ಸೆಂಟರ್ (ಈಗ ನವೀ ಮುಂಬಯಿ ಎಂದು ಕರೆಯಲಾಗುತ್ತದೆ) ಸ್ಥಾಪಿಸುವ ಶಿಫಾರಸ್ಸಿಗೆ ಕರಡು ಯೋಜನೆ ಪ್ರಕಟಿಸಿತು. ಹೊಸ ಅವಳಿ ನಗರ ಮುಂಬಯಿಯ ಜನದಟ್ಟಣೆ ಕಡಿಮೆ ಮಾಡಲು ಬಾಂಬೆ ಮೆಟ್ರೋ ಪಾಲಿಟನ್ ಪ್ರಾಂತಕ್ಕೆ ಸುಲಭವಾದ ಯೋಜನೆಯಾಗಿ ಬಾಂಬೆ ಮುನ್ಸಿಪಲ್ ಕಾರ್ಪೊರೇಶನ್ ಈ ಯೋಜನೆಗೆ ಒಪ್ಪಿಗೆ ನೀಡಿತು. === ಸಿಡ್ಕೊ ಅಭಿವೃದ್ಧಿ === ಭಾರತದ ಕಂಪನಿ ಕಾಯಿದೆ ೧೯೫೬ರ ಅಡಿಯಲ್ಲಿ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ (ಸಿಡ್ಕೊ) ೧೭ ಮಾರ್ಚ್ ೧೯೭೧ರಂದು ರೂಪುಗೊಂಡಿತು. ಇದು ಸುಮಾರು ೩೪೪ ಕಿಮೀ² ಪರಿವರ್ತನೆ ಮಾಡಲು ಆದೇಶ ನೀಡಿತು. ಜೌಗುಪ್ರದೇಶದ ಥಾನೆ ಜಿಲ್ಲೆಯಲ್ಲಿನ ದಿಘೆ ಮತ್ತು ರಾಯ್ಗಡ್ ಜಿಲ್ಲೆಯಲ್ಲಿನ ಕಲುಂದ್ರೆ ಹಳ್ಳಿಗಳ ನಡುವೆ ಹೊಸ ನಗರ ಇತ್ತು. ಇದು ಕೊಂಕಣ ಕರಾವಳಿಯ ಒಟ್ಟು ೭೨೦ಕಿಮೀಯಲ್ಲಿ ೧೫೦ ಕಿಮೀ ಕೊಲ್ಲಿಗಡಿ ಒಳಗೊಂಡಿತ್ತು. ಹಳ್ಳಿಗರು ನೆರೆಯ ಮುಂಬಯಿ ನಗರದ ಜೀವನಕ್ಕಿಂತ ಭಿನ್ನವಾಗಿ ಹೆಚ್ಚು ಶಾಂತವಾಗಿ ಬದುಕುತ್ತಿದ್ದರು (ನಂತರ ಬಾಂಬೆ ಎಂದು ಕರೆಯಲಾಯಿತು). ಸ್ವಂತವಾಗಿ ಭೂಮಿ ಹೊಂದಿರುವ ೮೬ ಹಳ್ಳಿಗಳು ಮತ್ತು ೧೫,೯೫೪ ಹೆಕ್ಟೇರ್ ಗಳನ್ನು ಪ್ರಸ್ತುತ ಮಿತಿಯಲ್ಲಿ ಹೊಸ ಮುಂಬಯಿಯ ಒಳಗೆ ಅಳೆಯಲಾಯಿತು ಮತ್ತು ಇನ್ನೂ ಹೆಚ್ಚಿನ ಹಳ್ಳಿಗಳ ೨,೮೭೦ ಹೆಕ್ಟೇರ್‌ಗನ್ನು ಅಳೆದು ಮಹಾರಾಷ್ಟ್ರ ಸರ್ಕಾರ ಸ್ವಾಧೀನ ಪಡಿಸಿಕೊಂಡಿತು. ಈ ಪ್ರದೇಶದಲ್ಲಿ ೧೪ ಘಟಕಗಳನ್ನು - ಅಂದರೆ ಚಿಕ್ಕ ಉಪನಗರಗಳನ್ನು - ರಚಿಸಿತು. ಅದರ ಉದ್ದೇಶ ಈ ನಗರದ ಸಂಪೂರ್ಣ ಬೆಳವಣಿಗೆ ಮತ್ತು ಹೊಸ ನಗರವಾಗಿ ಗುರುತು ನೀಡುವುದಾಗಿತ್ತು. ಈ ಘಟಕಗಳು ಹೆಸರುಗಳು ಏರೋಲಿ, ಗಾನ್ಸೋಲಿ, ಕೋಪರ್ ಕೈರೇನ್, ವಾಶಿ, ಸನ್ಪದಾ, ನೆರೂಲ್, ಸಿಬಿಡಿ ಬೆಲಾಪೂರ್, ಕಾರ್ಘರ್, ಕಾಲಾಂಬೋಲಿ, ಕಮೊಥೆ, ನ್ಯೂ ಪನ್ವೇಲ್, ಉಲ್ವೆ, ಪುಷ್ಪಕ್ ಮತ್ತು ದ್ರೋಣಗಿರಿ. ಸಿಡ್ಕೊ ೧೯೩.೯೪ ಕಿಮೀ² ಭೂಮಿ ವಶಪಡಿಸಿಕೊಂಡಿದೆ ೧೪೧.೦೫ ಕಿಮೀ² ಖಾಸಗಿ ಭೂಮಿ, ಸುಮಾರು ೨೨.೯೨ ಕಿಮೀ² ಉಪ್ಪು-ಮಡಿ ಭೂಮಿ ಮತ್ತು ೫೨.೮೯ ಕಿಮೀ² ಸರ್ಕಾರಿ ಭೂಮಿ ಒಳಗೊಂಡಿದೆ. ೨೦೦೦ನೇ ವರ್ಷದಲ್ಲಿ ಸಿಡ್ಕೊ ಸುಮಾರು ೧೧೭.೬೦ ಕಿಮೀ² ಭೂಮಿಯನ್ನು ಅಭಿವೃದ್ಧಿ ಗೊಳಿಸಿದೆ. ಈ ಭೂಮಿಯಲ್ಲಿ, ೫೪.೪೫ ಕಿಮೀ² ವಿವಿಧ ಉಪಯೋಗಕ್ಕೆ ಮಾರಾಟವಾಗತಕ್ಕ ಭೂಮಿ. ಸಿಡ್ಕೊ ಸುಮಾರು ೨೧.೯೦ ಕಿಮೀ² ಜಾಗವನ್ನು ಮಾರಿ ಸುಮಾರು ೩೨.೫೮ km² ಜಾಗವನ್ನು ಬೇರೆ ಬಳಕೆಗಾಗಿ ಮಾರಲು ಉಳಿಸಿಕೊಂಡಿತು. ಹೊಸ ಮುಂಬಯಿಯಲ್ಲಿ ಸಿಡ್ಕೊ ಯೋಜಿಸಿ ಎಲ್ಲಾ ರೈಲು ನಿಲ್ದಾಣವನ್ನು ನಿರ್ಮಿಸಿದೆ ಮತ್ತು ಸಮೀಪದ ಪ್ರದೇಶಗಳನ್ನು ವಾಣಿಜ್ಯೀಕರಣಕ್ಕೆ ಅಭಿವೃದ್ದಿಗೊಳಿಸಿದೆ. ೧೯೭೩ರಲ್ಲಿ ಥಾನೆ ಕೊಲ್ಲಿ ರಸ್ತೆ ಸೇತುವೆ, ವಾಶಿ ಸೇತುವೆ, ವಾಶಿ,ಬೆಲಾಪೂರ್ ಮತ್ತು ನೆರೂಲ್ ನಿವಾಸಿಗಳ ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಸಿಯಾನ್‌ನಿಂದ ಪನ್ವೇಲ್‌ಗೆ ಪ್ರಯಾಣ ಮಾಡುವ ಸಮಯವನ್ನು ಕಡಿಮೆ ಮಾಡಲು ಸಿಯಾನ್ ಪನ್ವೇಲ್ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಯಿತು. ಮೊದಲಿಗೆ ಹೊಸ ನಗರಕ್ಕೆ ಹೆಚ್ಚು ಪ್ರತಿಕ್ರಿಯೆ ಸಿಗಲಿಲ್ಲ. ೧೯೯೦ರ ನಂತರ ಸ್ಥಳದಲ್ಲಿ ಪ್ರಮುಖ ಬದಲಾವಣೆಯಾಯಿತು, ವಾಶಿಯಲ್ಲಿನ ಸಗಟು ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ ಮತ್ತು ಮೇ ೧೯೯೨ರಲ್ಲಿ ಮನ್ಕುರ್ದ್‌ನಿಂದ ವಾಶಿವರೆಗೆ ನಿತ್ಯಪ್ರಯಾಣಿಕ ರೈಲು ಹಳಿ ನಿರ್ಮಾಣ ಮಾಡಲಾಯಿತು. ಈ ಬೆಳವಣಿಗೆಗಳ ಕಾರಣದಿಂದ ಹೊಸ ಮುಂಬಯಿಯಲ್ಲಿ ತಕ್ಷಣ ಆರ್ಥಿಕ ಚಟುವಟಿಕೆಗಳು ಮತ್ತು ಜನಸಂಖ್ಯೆ ಹೆಚ್ಚಾಯಿತು. === ಇತ್ತೀಚಿನ ಬೆಳವಣಿಗೆಗಳು === ೧೯೯೦ರ ಕೊನೆಯಿಂದ, ಹೊಸ ಮುಂಬಯಿಯ ಯೋಜನಾ ಪ್ರಾಧಿಕಾರ ಹೊಸ ಮುಂಬಯಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಮೊದಲುಮಾಡಿತು. ಕೆಲವು ಹಳೆಯ ಮತ್ತು ಹೆಚ್ಚು ಜನದಟ್ಟಣೆಯ ಘಟಕಗಳು ವಾಶಿ, ನೆರೂಲ್ ಮತ್ತು ಬೆಲಾಪೂರ್. ಕೆಲವು ಇತ್ತೀಚಿನ ಬೆಳವಣಿಗೆಗಳು ಕಾರ್ಘರ್ಮತ್ತು ನ್ಯೂ ಪನ್ವೇಲ್ ಒಳಗೊಂಡಿದೆ. ೧.೫ ಮೈಲು ಉದ್ದದ ಏರೋಲಿ ಸೇತುವೆ ಥಾನೆ ಕೊಲ್ಲಿ ಮೇಲೆ ಏರೋಲಿಮತ್ತು ಮುಲುಂದ್ ನಡುವೆ ನಿರ್ಮಿಸಲಾಗಿದೆ-ಮುಂಬಯಿ ನಗರದ ಪೂರ್ವೌಪನಗರವಾಗಿದೆ. == ಆಡಳಿತ == === ಸಿಡ್ಕೊ === ೧೯೭೦ರಲ್ಲಿ ಹೊಸ ಮುಂಬಯಿ ಸೃಷ್ಟಿಯಾಯಿತು, ಸಿಡ್ಕೊ ಮಾತ್ರ ನಗರದ ನಂತರದ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುವ ಅಧಿಕಾರ ನೋಡಿಕೊಳ್ಳುತ್ತಿದೆ. ಸಿಡ್ಕೊ ಥಾನೆ ಮತ್ತು ರಾಯ್ಗಡ್ ಜಿಲ್ಲೆಯ ೯೫ ಹಳ್ಳಿಗಳನ್ನೊಳಗೊಂಡು ಹೊಸ ಮುಂಬಯಿ ಅಭಿವೃದ್ಧಿ ಯೋಜನೆ ತಯಾರಿಸಿದೆ. ಸಿಡ್ಕೊ ಯೋಜನೆಯ ಮೊದಲ ಹತ್ತು ವರ್ಷ ಯೋಜನಾ ಮತ್ತು ಆಡಳಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಿದೆ , ಹಾಗೆಯೇ ಯೋಜನೆಗೆ ಡೆವಲಪರ್ ಮತ್ತು ಬಿಲ್ಡರ್‌ಗಳು ಕೂಡ. ಆಸ್ತಿ , ಭೂಮಿ, ವಾಣಿಜ್ಯ, ನೀರು ತೆರಿಗೆಯನ್ನು ಸಿಡ್ಕೊಗೆ ಪಾವತಿಸಬೇಕು. ಸಿಡ್ಕೊ ಏರೋಲಿ,ಗಾನ್ಸೋಲಿ,ಕೋಪರ್ ಕೈರೇನ್, ವಾಶಿ,ಸನ್ಪದಾ, ನೆರೂಲ್,ಸಿಬಿಡಿ ಬೆಲಾಪೂರ್, ಕಾರ್ಘರ್, ಕಾಲಾಂಬೋಲಿ, ಕಮೊಥೆ,ನ್ಯೂ ಪನ್ವೇಲ್, ಉಲ್ವೆ, ಪುಷ್ಪಕ್ ಮತ್ತು ದ್ರೋಣಗಿರಿ ಹೆಸರಿನ ೧೪ ಘಟಕಗಳು ರಚಿಸಿದೆ. ಪ್ರತಿಯೊಂದು ಘಟಕಗಳನ್ನು ಸಣ್ಣ ಗುಂಪುಗಳಾಗಿ ವಿಭಾಗಿಸಿ ಸೆಕ್ಟರ್ಸ್ ಎಂಸು ಕರೆಯಲಾಗುತ್ತದೆ. ಸೆಕ್ಟರ್ಸ್‌ಗಳ ಹೆಸರುಗಳು ಸಂಖ್ಯೆಗಳಾಗಿವೆ. ಮೊದಲಿಗೆ ವಾಶಿ,ನೆರೂಲ್, ಸಿಬಿಡಿ ಬೆಲಾಪೂರ್, ಏರೋಲಿ ಮಾತ್ರ ಸಿಡ್ಕೊ ಮನೆಗಳು,ಶಾಲೆಗಳು ಮತ್ತು ಸಮುದಾಯ ಕೇಂದ್ರ ರಸ್ತೆಗಳಿಗಾಗಿ ಅಭಿವೃದ್ದಿ ಗೊಳಿಸಿತು. ಆದರೆ ೧೯೯೦ರಲ್ಲಿ ಹಾರ್ಬರ್ ಲೈನ್ ವಿಸ್ತರಣೆಯಾಗಿ ಬಂದ ನಂತರ,ಜನಸಂಖ್ಯೆಯಲ್ಲಿ ಹೆಚ್ಚಳವಾಯಿತು. ಕಾರ್ಘರ್,ನ್ಯೂ ಪನ್ವೇಲಿ,ಏರೋಲಿ,ಘಾನ್ಸೋಲಿ,ಕೊಪರ್ ಕೈರನೆಯಂತಹ ಘಟಕಗಳಿಗೆ ಸಿಡ್ಕೊ ತನ್ನ ಅಭಿವೃದ್ಧಿ ಯೋಜನೆಯನ್ನು ಬದಲಾಯಿಸಿತು. ಇದರ ನವೀನ ಅಭಿವೃದ್ಧಿ ಯೀಜನೆಯಲ್ಲಿ, ಸಿಡ್ಕೊ ಭೂಮಿ ಮನೆನಿರ್ಮಾಣ ಮಾಡಲು ಬಿಲ್ಡರ್‌ಗಳಿಗೆ ಹಂಚಿತು. ಸಿಡ್ಕೊ ಮೂಲ ಸೌಕರ್ಯಗಳಾದ ರಸ್ತೆ,ನೀರು,ಮತ್ತು ವಿದ್ಯುತ್‌ಗಳಂತಹವುಗಳನ್ನು ಮಾತ್ರ ಒದಗಿಸುತ್ತಿದೆ; ಈ ಘಟಕಗಳು ಹೆಚ್ಚಾಗಿ ಖಾಸಗಿ ಬಿಲ್ಡರ್‌ಗಳಿಂದ ಅಭಿವೃದ್ಧಿಗೊಂಡವು. === ಎನ್‌ಎಂಎಂಸಿ === ೧೭ ಡಿಸೆಂಬರ್ 1991ರಲ್ಲಿ ಹೊಸ ಮುಂಬಯಿಯ ಅಭಿವೃದ್ಧಿ ಹೊಂದಿದ ಕೆಲವು ಘಟಕಗಳನ್ನು ನಿರ್ವಹಣೆ ಮಾಡಲು ರಾಜ್ಯ ಸರ್ಕಾರದಿಂದ ಹೊಸ ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (ಎನ್‌ಎಂಎಂಸಿ) ರಚನೆಯಾಯಿತು. ಜನವರಿ ೧ ೧೯೯೨ರಂದು ಸ್ಥಳೀಯ ಸ್ವಯಂಆಡಳಿತ ಪ್ರಾರಾಂಭವಾಯಿತು. ಹೊಸ ಮುಂಬಯಿ ಯೋಜನೆಯ ಪ್ರದೇಶದಲ್ಲಿ ಎನ್‌ಎಂಎಂಸಿ ತನ್ನ ಅಧಿಕಾರ ವ್ಯಾಪ್ತಿಗೆ ೨೫ ಘಟಕಗಳ ೯ನ್ನು ನೋಡಿಕೊಳ್ಳುತ್ತಿದೆ. ಹಾಗಿದ್ದಾಗ್ಯೂ, ಸಿಡ್ಕೊ, ಯೋಜನಾ ಪ್ರಾಧಿಕಾರವಾಗಿ ಈ ಐದು ಘಟಕಗಳ ಮುಕ್ತ ನೆಲದ ಮೇಲೆ ಹಕ್ಕು ಹೊಂದಿದೆ. ೯ ಘಟಕಗಳು ೦}ಬೆಲಾಪೂರ್, ನೆರೂಲ್, ವಾಶಿ, ತುರ್ಬೆ, ಕೊಪರ್‌ಕೈರನೆ, ಘೋನ್ಸಾಲ್, ಏರೋಲಿ, ದಿಘಾ, ದಹಿಸರ್ ಜನವರಿ ೧, 1998 ರಂದು ಎಲ್ಲಾ ಭೌತಿಕ ಮತ್ತು ಸಾಮಾಜಿಕ ಸೌಲಭ್ಯಗಳೊಂದಿಗೆ ಸಿದ್ಧವಾಗಿದ್ದವು. ಮುನ್ಸಿಪಲ್ ಕಾರ್ಪೊರೇಶನ್‌ನ ಮುಖ್ಯಸ್ಥರು ಮುನ್ಸಿಪಲ್ ಕಮೀಶನರ್ ಮತ್ತು ಚುನಾಯಿತ ಮೇಯರ್. ಹೊಸ ಮುಂಬಯಿಯಲ್ಲಿ ೬೪ ಚುನಾವಣೆಯ ಹಕ್ಕುಳ್ಳ ವಾರ್ಡ್‌ಗಳಿವೆ. ಪ್ರತಿಯೊಂದು ವಾರ್ಡ್‌ನಲ್ಲಿಯು ಕಾರ್ಪೊರೇಟರ್ ಆಯ್ಕೆಯಾಗುತ್ತಾರೆ. ಎಲ್ಲಾ ಘಟಕಗಳು ಥಾನೆ ಜಿಲ್ಲೆಯ ಮುನ್ಸಿಪಲ್ ಕಾರ್ಪೊರೇಶನ್ ಅಡಿಯಲ್ಲಿ ಬರುತ್ತವೆ. ಹೊಸ ಮುಂಬಯಿಯ ದಕ್ಷಿಣ ಭಾಗದಲ್ಲಿ ಬರುವಂತಹ ಹೊಸದಾಗಿ ಅಭಿವೃದ್ಧಿಯಾದ ಘಟಕಗಳು ಕಾರ್ಘರ್, ಕಮೊಥೆ, ಕಲಾಂಬೋಲಿ, ನ್ಯೂ ಪನ್ವೇಲ್ ಮತ್ತು ಪನ್ವೇಲ್ ಈಗಲೂ ಸಿಡ್ಕೊನಿಂದ ನಿರ್ವಾಹಣೆ ಮಾಡುಲ್ಪಡುತ್ತದೆ ಮತ್ತು ಎನ್‌ಎಂಎಂಸಿ ಅಧಿಕಾರ ವ್ಯಾಪ್ತಿಯಡಿಯಲ್ಲಿ ಬರುವುದಿಲ್ಲ. ಈ ಘಟಕಗಳು .. ಘಟಕಗಳು ಬೆಲಾಪೂರ್ (ಸಿಬಿಡಿ) ರಾಯ್ಗಡ್ ಜಿಲ್ಲೆಗೆ ಒಳಪಡುವುದಿಲ್ಲ ಮತ್ತು ಪನ್ವೇಲ್ ಮುನ್ಸಿಪಲ್ ಕೌನ್ಸಿಲ್ ಅಡಿಯಲ್ಲಿ ಬರುತ್ತದೆ. ಹೊಸ ಮುಂಬಯಿ ಮುನ್ಸಿಪಲ್ ಟ್ರಾನ್ಸ್‌ಪೋರ್ಟ್ ವಹಿಸಿಕೊಳ್ಳುವಿಕೆ ಅಥವಾ ಎನ್‌ಎಂಎಂಟಿ ಹೊಸ ಮುಂಬಯಿ ನಗರದ ಸ್ಥಳೀಯ ಸಾರಿಗೆ ಸೇವೆಯು ಹೊಸ ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ನಡೆಸಲ್ಪಡುತ್ತಿದೆ ಮತ್ತು ಸಮೀಪದಲ್ಲಿರುವ ದೊಂಬಿವ್ಲಿ, ಬ್ಯಾಡ್ಲಾಪೂರ್, ಉರಾನ್, ಪನ್ವೇಲ್, ಥಾನೆ, ಕಲ್ಯಾಣ್ ಮತ್ತು ಮುಲುಂದ್ ಪ್ರದೇಶಗಳನ್ನು ವಹಿಸಿಕೊಂಡಿದೆ. == ರಾಜಕೀಯ == ನಗರವು ಒಂದು ಸಂಸತ್ ಸದಸ್ಯತ್ವ ಸ್ಥಾನ, ಎರಡು ಎಂಎಲ್‌ಎ ಮತ್ತು ೮೯ ಕಾರ್ಪೊರೇಶನ್ ಸ್ಥಾನ ಹೊಂದಿದೆ.ಹೊಸ ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯಿಂದ ಆಳಲ್ಪಡುತ್ತಿದೆ. ರಾಜಕೀಯದಲ್ಲಿ ಎನ್‌ಸಿಪಿ ಪ್ರಮುಖ ಹಿಡಿತ ಹೊಂದಿದ್ದು ಎನ್‌ಎಂಎಂಸಿಯಲ್ಲಿ ೫೫ ಸ್ಥಾನ ಮತ್ತು ಎಲ್ಲಾ ಎಂಪಿ ಮತ್ತು ಎಂಎಲ್‌ಎ ಸ್ಥಾನವನ್ನು ಗೆದ್ದಿದೆ.ಶಿವ ಸೇನಾ-ಬಿಜೆಪಿ ೧೭ ಮೈತ್ರಿಸ್ಥಾನಗಳನ್ನು ಕಾರ್ಪೊರೇಶನ್‌ನಲ್ಲಿ ಹೊಂದಿ ಎರಡನೇಯ ದೊಡ್ಡ ಹಿಡಿತ ಹೊಂದಿವೆ . ಪುರಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೩ ಸ್ಥಾನ ಹೊಂದಿದೆ. ಪುರಸಭೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನಾ ದಂತಹ ಇತರೆ ಪಕ್ಷಗಳು ಒಂದು ಸ್ಥಾನ ಹೊಂದಿಲ್ಲದಿದ್ದರೂ ಸಣ್ಣದಾದ ಉಪಸ್ಥಿತಿಯನ್ನು ಕೊಚ್ಚಿಕೊಳ್ಳುತ್ತವೆ.ಹಾಗೆಯೇ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಭಾರತೀಯ ಗಣತಂತ್ರವಾದಿ ಪಕ್ಷ (ಅಥ್ವಾಲೆ) , ಜನತಾದಳ(ಜಾತ್ಯಾತೀತ)ದಂತಹ ಪಕ್ಷಗಳು ಮತ್ತು ಇತರೆ ಹಲವು ಪಕ್ಷಗಳು ಇಲ್ಲಿ ಸ್ಪರ್ಧಿಸಿದರು ಆದರೆ ಯಾವುದೇ ಅಧಿಕಾರ ಸಿಗಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಜರಂಗ ದಳ ದಂತಹ ಸಂಸ್ಥಗಳು ಇಲ್ಲಿದ್ದರೂ ರಾಜಕೀಯದಲ್ಲಿ ಯಾವುದೇ ಸಾಥನೆ ಮಾಡಿಲ್ಲ. ಗಣೇಶ್ ನಾಯ್ಕ್ ,ಎಂಪಿ ಸಂಜೀವ್ ನಾಯ್ಕ್, ಎಂಎಲ್‌ಎ ಸಂದೀಪ್ ನಾಯ್ಕ್ , ಬಿಜೆಪಿ ಮುಖಂಡ ಸುರೇಶ್ ಹವಾರೆ ಮತ್ತು ಶಿವ ಸೇನಾ ಮುಖ್ಯಸ್ಥ ವಿಜಯ್ ಚೌಗುಲೆ ಇವರು ಹೊಸ ಮುಂಬಯಿಯಿಂದ ಬಂದ ಪ್ರಮುಖ ರಾಜಕೀಯ ನಾಯಕರು. == ಪ್ರಾಕೃತಿಕ ವೈಶಿಷ್ಟ್ಯಗಳು == ಹೊಸ ಮುಂಬಯಿಯು ಮಹಾರಾಷ್ತ್ರದ; ಥಾನೆ,ಮತ್ತು ರಾಯ್ಗಡ್ ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಪ್ರದೇಶದ ಕೆಲವು ಭಾಗಗಳಲ್ಲಿ ಬೆಟ್ಟ ಪ್ರದೇಶಗಳು, ಮತ್ತು ಸ್ವಲ್ಪ ಭಾಗವು ವೆಟ್‌ಲ್ಯಾಂಡ್‌ಗಳಿಂದ ರಕ್ಷಿಸಲ್ಪಟ್ಟಿದೆ. ಇದರ ದೊಡ್ಡ ನೆರೆಹೊರೆಗಿಂತ ಭಿನ್ನವಾಗಿದೆ ,ನಗರವು ವಿರಳವಾದ ಜನಸಂಖ್ಯೆ ಹೊಂದಿದೆ. ಹೊಸ ಮುಂಬಯಿ ದಕ್ಷಿಣ ಕೊಂಕಣ ಕರಾವಳಿ ಗದಿಯ ಭಾಗವಾಗಿದೆ. ಈ ಕರಾವಳಿ ತೀರವು ದಕ್ಷಿಣಕ್ಕೆ ಸಹ್ಯಾದ್ರಿ ಪರ್ವತ ಶ್ರೇಣಿ ಮತ್ತು ಪೂರ್ವಕ್ಕೆ ೫೦ಮೀ ೧೦೦ಮೀ ಎತ್ತರದ ಬೆಟ್ಟಗಳನ್ನು ಹೊಂದಿದೆ. ಹೊಸ ಮುಂಬಯಿ ಪ್ರದೇಶಾವು ಪರ್ವತ ಶ್ರೇಣಿಗಳು ಮತ್ತು ಕರಾವಳಿ ತೀರದ ನಡುವೆ ಚಾಚಿಕೊಂಡಿದೆ. ಇದರ ನಿರ್ದೇಶಾಂಕಗಳು ಅಕ್ಷಾಂಶ ರೇಖೆ ೧೯.೫’ ಮತ್ತು ೧೯.೧೫’, ರೇಖಾಂಶ ೭೨.೫೫’ ಮತ್ತು ೭೩.೫’ಮಧ್ಯೆ. === ಭೂಗೋಳ ಮತ್ತು ಭೂವಿಜ್ಞಾನ === ಪೂರ್ವದ ಉದ್ದಕ್ಕೂ, ಸಣ್ಣ ಬೆಟ್ಟಗಳು ದಕ್ಷಿಣೊತ್ತರ ದಿಕ್ಕಿನಲ್ಲಿ ಹಬ್ಬಿವೆ. ಈ ಭೂಮಿಯು ಕೊಂಕಣ ಪ್ರಾಂತದ ಭಾಗವಾಗಿ ರೂಪುಗೊಂಡಿದೆ . ಭೂಮಿಯ ಕಿರಿದಾದ ಪಟ್ಟಿಯು ದಕ್ಷಿಣದಲ್ಲಿ ದಿಘೆಯಿಂದ ಪ್ರಾರಂಭವಾಗಿ ದಕ್ಷಿಣದಲ್ಲಿ ಕಲುಂದ್ರೆಯಲ್ಲಿ ಮುಕ್ತಾಯವಾಗಿತ್ತದೆ. ಇದು ೨೫.೬ ಕಿಮೀ² ಪ್ರದೇಶವಾಗಿದ್ದು, ೨೦ ಕಿಮೀ ಉದ್ದ ಮತ್ತು ೨ ಕಿಮೀ ವಿಶಾಲವಾಗಿದೆ. ಪಶ್ಚಿಮ ಕೊಂಕಣ ಕರಾವಳಿಯು ಪಶ್ಚಿಮ ಸಹ್ಯಾದ್ರಿಗಳ ಭಾಗದ ಉದ್ದಕ್ಕೂ ಕಿರಿದಾದ ಕರಾವಳಿ ಪಟ್ಟಿ ಹೊಂದಿದೆ. ಇದು ಪೂರ್ವಕ್ಕೆ ೫೦ ರಿಂದ ೨೦೦ ಮೀ ಎತ್ತರದ ದಿಬ್ಬಗಳಿಂದ ಮತ್ತು ಪಶ್ಚಿಮಕ್ಕೆ ಥಾನೆ ಕೊಲ್ಲಿಯ ಗಡಿ ಹೊಂದಿದೆ. ಈ ಪ್ರದೇಶದಲ್ಲಿನ ಕಲ್ಲು ಮುಖ್ಯವಾಗಿ ದಕ್ಕನ್ ಕಪ್ಪುಶಿಲೆ ಮತ್ತು ಹಾಗೆಯೇ ಗ್ರಾನೈಟ್‌ಗಳು, ನೈಸ್() ಮತ್ತು ಲೆಟರೈಟ್ ರಚನೆಯನ್ನು ಹೊಂದಿವೆ. ನಿಧಾನವಾಗಿ ಇಳಿಜಾರಾದ ಕರಾವಳಿಯ ಕೆಳಪ್ರದೇಶದಲ್ಲಿ ಹುದುಗುವಂತಹ ಮಣ್ಣಿದ್ದು ಅದು ಹೆಚ್ಚಾಗಿ ಜಂಬುಮಣ್ಣಿನ ಸ್ವಭಾವ ಹೊಂದಿದ್ದು, ಅದು ಹಳದಿ ಮರ್ರಮ್ ಆಗಿ ಆಕ್ಸಿಡೀಕರಣಗೊಳ್ಳುತ್ತದೆ. ಈ ಪ್ರದೇಶದ ಕೊಲ್ಲಿಯ ಸುತ್ತಮುತ್ತಲಿನ ಮಣ್ಣಿನಲ್ಲಿ ಹೆಚ್ಚು ಉಪ್ಪಿನಂಶ ಹೊಂದಿದ್ದು ಇತರೆ ಸ್ಥಳಗಳಲ್ಲಿ ಕಡಿಮೆ ಉಪ್ಪಿನಂಶ ಹೊಂದಿದೆ . ಇವುಗಳು ಕ್ಯಾಲ್ಕಾರೆಯಸ್, ಪ್ರತಿಕ್ರಿಯೆಯಲ್ಲಿ ಕ್ಷಾರೀಯತೆಗೆ ತಟಸ್ಥವಾಗಿದ್ದು (ಪಿಎಚ್ ೭.೫ ರಿಂದ ೮.೫), ಕೆಲವೊಮ್ಮೆ ಜೇಡಿಮಣ್ಣು ಒಳಗೊಂಡಿರುತ್ತದೆ,ಜೊತೆಗೆ ಹೆಚ್ಚು ಪ್ರಮಾಣದ ಅಡಿಪಾಯ ಮತ್ತು ಹೆಚ್ಚು ನೀರಿನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿದೆ (೨೦೦–೨೫೦ /). ಇಳಿಜಾರು ಗುಡ್ಡದಲ್ಲಿರುವ ಮಣ್ಣು ಗುಣದಲ್ಲಿ ಲ್ಯಾಟರಿಟಿಕ್ ಮತ್ತು ಗಾಢವಾದ ಪ್ರತ್ಯೇಕಿಸಿದ ಮೇಲ್ಪದರ ತೋರುತ್ತವೆ. ಅವು ಹೆಚ್ಚಾಗಿ ಕಳಿಮಣ್ಣಿನಂತಿದ್ದು ತುಸುವಿನಿಂದ ಮಧ್ಯಮದವರೆಗೆ ಆಮ್ಲೀಯವಾಗಿರುತ್ತವೆ ( ೫-೬.೫) ಮತ್ತು ಮಾಧ್ಯಮಿಕವಾದ ಬೇಸ್ ಸ್ಥಿತಿಯನ್ನು ಹೊಂದಿರುತ್ತವೆ.(< 75%). === ಭೂಮಿಯ ಉಪಯೋಗ === ಭೂಮಿಯನ್ನು ಮಳೆಗಾಲದಲ್ಲಿ ಅಕ್ಕಿ ಬೆಳೆಯಲು ಉಪಯೋಗಿಸುತ್ತಾರೆ. ಸ್ಥಳೀಯರಿಂದ ಕೆಲವು ಮಾವು ಮತ್ತು ತೆಂಗಿನಕಾಯಿ ಹಣ್ಣಿನ ತೋಟಗಳು ಮತ್ತು ಮಿತವಾದ ತರಕಾರಿ ಬೇಸಾಯ ಕೂಡ ರೂಡಿಯಲ್ಲಿದೆ. ಒಳ್ಳೆಯ ನೀರಾವರಿ ಸೌಲಭ್ಯವು ತೊಗರಿ ಮತ್ತು ಬೀನ್ಸ್‌ ನಂತಹ ದ್ವಿದಳಧಾನ್ಯ ಬೆಳೆಯಲು ಆಯ್ಕೆಮಾಡಲಾಗಿದೆ. ನಗರೀಕರಣದ ಜೊತೆಗೆ, ಹಾಗಿದ್ದಾಗ್ಯೂ,ಪೂರ್ವಭಾಗವನ್ನು ಹೊರತು ಪಡಿಸಿ ಹೊಸ ಮುಂಬಯಿಯಲ್ಲಿ ಎಲ್ಲಾ ಕೃಷಿ ಚಟುವಟಿಕೆಗಳು ಕೈಬಿಟ್ಟು ಹೆಚ್ಚುಕಡಿಮೆ ಮರೆಯಾಗಿವೆ. ಮೀನು, ಏಡಿಗಳು ಮತ್ತು ಪ್ರಾನ್‌ಗಳು ಕೊಲ್ಲಿಯ ಸಮಾನ್ಯ ಉತ್ಪನ್ನಗಳು,ಆದಾಗ್ಯೂ ಈ ಎಲ್ಲಾ ಪ್ರಮಾಣಗಳು ಗಮನಾರ್ಹವಾಗಿಲ್ಲ. ಥಾನೆ ಮತ್ತು ಬೆಲಾಪೂರ್ ಮಾರುಕಟ್ಟೆಗಳಲ್ಲಿ ಉಳಿದ ಮನೆಬಳಕೆಯ ವಸ್ತುಗಳು ಮಾರಾಟವಾಗುತ್ತವೆ. ಪ್ರದೇಶದಲ್ಲಿ ಕೈಗಾರಿಕೆಗಳ ಆಗಮನ ಮತ್ತು ನೀರಿನ ಗುಣಮಟ್ಟ ನಿರಂತರವಾಗಿ ಕೆಟ್ಟಿದ್ದರಿಂದಾಗಿ ಈ ಮಾರುಕಟ್ಟೆಗಳು ಕಳೆದುಹೋದವು. == ಏರೋಲಿ == ಏರೋಲಿ ಹೆಚ್ಚು ಅಭಿವೃದ್ಧಿ ಹೊಂದಿದ ಹೊಸ ಮುಂಬಯಿಯ ಐದನೇಯ ಉಪನಗರ . ಇದು ಹೊಸ ಮುಂಬಯಿಯ ಹೆಚ್ಚು ಅಭಿವೃದ್ಧಿ ಹೊಂದಿದ ನೆರೆಹೊರೆಯ, ವಾಶಿ ಮತ್ತು ನೆರೂಲ್ ನಗರ ಸಾರಿಗೆ ಮತ್ತು ಸ್ಥಳೀಯ ರೈಲು ಸೇವೆಗಳ ಸಂಪರ್ಕ ಕಲ್ಪಿಸುತ್ತದೆ. ರೈಲಿನಲ್ಲಿ ಏರೋಲಿಯಿಂದ ಥಾನೆಗೆ 8 ನಿಮಿಷದಲ್ಲಿ ಮತ್ತು ನಗರ ಸಾರಿಗೆಯಿಂದ ಮುಲುಂದ್‌ಗೆ 10 ನಿಮಿಷದಲ್ಲಿ ತಲುಪಬಹುದು. ಇತ್ತೀಚಿನ ವರ್ಷಗಳಲ್ಲಿ ಮುಲುಂದ್-ಏರೋಲಿ ಸೇತುವೆ ಏರೋಲಿಯ ತ್ವರಿತ ಬೆಳವಣಿಗೆಗೆ ಕೊಡುಗೆ ನೀಡಿದೆ,ಮುಲುಂದ್ ಮುಂಬಯಿಯ ಚಟಿವಟಿಕೆಯುಳ್ಳ ಉಪನಗರವಾಗಿದೆ; ಈ ಸೇತುವೆ ಮತ್ತು ಇತ್ತೀಚೆಗೆ ಥಾನೆಯಿಂದ ಪ್ರಾರಂಭವಾದ ರೈಲು ಸೇವೆಯು ಏರೋಲಿಯನ್ನು ಹೆಚ್ಚು ಸುಲಭವಾಗಿ ತಲುಪುವಂತೆ ಮಾಡಿದೆ. ಸೇತುವೆ ಏರೋಲಿ ಮತ್ತು ಮಧ್ಯ ರೇಲ್ವೆಯ ನಹೂರ್ ನಿಲ್ದಾಣದ ನಡುವಿನ ಸಂಪರ್ಕವಾಗಿ ಸೇವೆಸಲ್ಲಿಸುತ್ತಿದೆ. ಏರೋಲಿ ಎರಡು ಮುಖ್ಯ ನಿವಾಸಿ ಪ್ರದೇಶಗಳನ್ನು ಹೊಂದಿದೆ,ಏರೋಲಿ ಮತ್ತು ದಿವಾ ವಿಲೇಜ್. ಉಳಿದ ಪ್ರದೇಶವು ಸಿಡ್ಕೊನಿಂದ ಅಭಿವೃದ್ಧಿ ಹೊಂದಿದೆ (ನಗರ ಕೈಗರಿಕಾ ಅಭಿವೃದ್ಧಿ ಮಂಡಳಿ) ಮತ್ತು ನಂತರ ಆಡಳಿತಕ್ಕಾಗಿ ಎನ್‌ಎಂಎಂಸಿಗೆ ಹಸ್ತಾಂತರಿಸಲಾಯಿತು (ಹೊಸ ಮುಂಬಯಿ ಮುನ್ಸಿಪಲ್ ಕರ್ಪೊರೇಶನ್). ಏರೋಲಿಯನ್ನು 28 ವಲಯಗಳಾಗಿ ವಿಭಾಗಿಸಲಾಗಿದೆ. === ವಾಯುಗುಣ === ಭಾರತೀಯ ಪವನಶಾಸ್ತ್ರ ವಿಭಾಗ (ಐಎಂಡಿ) ಥಾನೆಯಲ್ಲಿ ಕಛೇರಿ ಹೊಂದಿದ್ದು ಬೆಲಾಪೂರ್ ಇಂಡಸ್ಟ್ರಿ ಅಸೋಸಿಯೇಶನ್ (ಟಿಬಿಐಎ) ಕಟ್ಟಡದಲ್ಲಿ ಪ್ರತಿದಿನ ಪವನಶಾಸ್ತ್ರ ಮಾಹಿತಿ ಸಂಗ್ರಹಿಸುತ್ತಾರೆ. ಈ ಪ್ರದೇಶವು ಆರ್ದ್ರದಿಂದ ಅರೆ ಒಣ ಮತ್ತು ಅರೆ ಆರ್ದ್ರತೆಯ ಉಪೋಷ್ಣೀಯ ಮಾನ್ಸೂನ್ ವಾಯುಗುಣವನ್ನು ಹೊಂದಿದೆ. ಕೊಪನ್ ಕ್ಲೈಮೇಟ್ ಕ್ಲಾಸಿಫಿಕೇಶನ್ ಅಡಿಯಲ್ಲಿ, ನಗರವು ಉಷ್ಣವಲಯದ ತೇವ ಮತ್ತು ಒಣ ಹವೆ ಹೊಂದಿದೆ. ಒಟ್ಟಾರೆಯಾಗಿ ವಾತಾವರಣವು ಹೆಚ್ಚು ಮಳೆ ಬೀಳುವ ದಿನಕ್ಕೆ ಸಮವಾಗಿದೆಮತ್ತು ಕೆಲವು ದಿನಗಳು ಹೆಚ್ಚು ತಾಪಮಾನದಿಂದ ಕೂಡಿರುತ್ತದೆ. ಒಟ್ಟು ಮಳೆ ಬೀಳುವ ಹೊರತಾಗಿ ನವು ಮುಂಬಯಿ ತಾಪಮಾನವು ೨೨°ಸೆ ನಿಂದ ೩೬°ಸೆ.ವರೆಗೆ ಬದಲಾವಣೆ ಹೊಂದುತ್ತದೆ ಚಳಿಗಾಲದಲ್ಲಿ ತಾಪಮಾನವು ೧೭°ಸೆ ನಿಂದ ೨೦°ಸೆ ನಡುವೆ ಹಾಗೆಯೇ ಬೇಸಿಗೆಯ ತಾಪಮಾನವು ೩೬°ಸೆ ನಿಂದ ೪೧°ಸೆ ವರೆಗೆ ಇರುತ್ತದೆ.೮೦% ಮಳೆಯು ಜೂನ್‌ನಿಂದ ಅಕ್ಟೋಬರ್ ಸಮಯದವರೆಗೆ ಅನುಭವವಾಗುತ್ತದೆ. ಸರಾಸರಿ ವಾರ್ಷಿಕ ಮಳೆ ಬೀಳುವ ಪ್ರಮಾಣ ೨೦೦೦–೨೫೦೦ ಮಿಮಿ ಮತ್ತು ಆರ್ದ್ರತೆ ೬೧-೮೬ % ಆಗಿದ್ದು ಇದು ಈ ವಲಯವನ್ನು ಆರ್ದ್ರ- ಮಧ್ಯಮ ಆರ್ದ್ರತೆಯ ವಲಯವನ್ನಾಗಿಸಿದೆ. ಚಳಿಗಾಲದಲ್ಲಿ ಅತಿ ಒಣ ದಿನಗಳು ಜುಲೈನಲ್ಲಿ ಅತ್ಯಂತ ತೇವದ ದಿನಗಳ ಅನುಭವವಾಗುತ್ತದೆ. ಐಎಂಡಿ ಪ್ರಕಾರ,ಮಾನ್ಸೂನ್‌ನಲ್ಲಿ ನೈಋತ್ಯ ದಿಕ್ಕಿಗೆ ಪ್ರಭಲವಾದ ಗಾಳಿ ಇರುತ್ತದೆ ಮತ್ತು ವರ್ಷದ ಉಳಿದ ದಿನಗಳಲ್ಲಿ ಈಶಾನ್ಯ ದಿಕ್ಕಿಗೆ ಇರುತ್ತದೆ . == ಜನಸಂಖ್ಯಾಶಾಸ್ತ್ರ == 2001 ಭಾರತದ ಜನಗಣತಿ ಸಮಯದಲ್ಲಿ,ಹೊಸ ಮುಂಬಯಿಯ ಜನಸಂಖ್ಯೆ ೭೦೩,೯೪೭ ಆಗಿತ್ತು. ಒಟ್ಟು ಜನಸಂಖ್ಯೆಯಲ್ಲಿ ೫೪% ಪುರುಷರು ಮತ್ತು ೪೬% ಮಹಿಳೆಯರು ಇದ್ದಾರೆ. ಹೊಸ ಮುಂಬಯಿಯ ಸರಾಸರಿ ಸಾಕ್ಷರತಾ ಪ್ರಮಾಣ ೭೪%, ರಾಷ್ಟ್ರೀಯ ಸರಾಸರಿಗಿಂತ ೫೯.೫% ಹೆಚ್ಚು: ಪುರುಷ ಸಾಕ್ಷರರು ೭೯%, ಮತ್ತು ೬೭%ರಷ್ಟು ಮಹಿಳಾ ಸಾಕ್ಷರರು. ಹೊಸ ಮುಂಬಯಿಯಲ್ಲಿ, ಜನಸಂಖ್ಯೆಯ ೧೪% ರಷ್ಟು ೬ ವರ್ಷ ವಯಸ್ಸಿನ ಕೆಳಗಿನವರು, ಜೊತೆಗೆ ೨೮% ರಷ್ಟು ೧೫ ವರ್ಷದವರೆಗಿನವರು, ೫೫% ರಷ್ಟು ೧೫-೪೪ ವರ್ಷ ವಯಸ್ಸಿನ ಗುಂಪಿಗೆ ಸೇರಿದವರು ಮತ್ತು ೧೩% ವಯಸ್ಸಾದವರು ೪೫–೫೯). ಮುಂಬಯಿಯ ೪.೮೫ ಸರಾಸರಿಗೆ ಹೋಲಿಸಿದಾಗ ಕುಟುಂಬದ ಸರಾಸರಿ ಗಾತ್ರ ೪.೦೫ ಜನರು. ಹೊಸ ಮುಂಬಯಿಯಲ್ಲಿ ೬೭% ಕುಟುಂಬಗಳು ತಮ್ಮ ಸ್ವಂತ ಮನೆಗಳಲ್ಲಿ ವಾಸಿಸುತ್ತಾರೆ ಮತ್ತು ಕೆಲಸಮಾಡುವ ಜನಸಂಖ್ಯೆಯಲ್ಲಿ, ೬೩.೫% ರಷ್ಟು ನಗರದ ಒಳಗಡೆಯೇ ಉದ್ಯೋಗ ಮಾಡುತ್ತಾರೆ. 2000ರಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ನಿಂದ ಸಮೀಕ್ಷೆ ಮಾಡಲ್ಪಟ್ಟಾಗ ಪ್ರಸ್ತುತ ೪೩% ಕುಟುಂಬಗಳು ಮುಂಬಯಿಯಿಂದ ಹೊಸ ಮುಂಬಯಿಗೆ ವಲಸೆ ಹೋಗಿವೆ. ಈ ಶೇಕಡಾವಾರು ನಂತರವು ಮುಂದುವರೆದಿದೆ. ಸಮೀಕ್ಷೆಯು ನಗರದಲ್ಲಿನ ಸಾಕ್ಷರತಾ ಪ್ರಾಮಾಣವು ೯೬%,ಒಟ್ಟು ೩೨% ಜನರು ಕೆಲಸ ಮಾಡುವವರು, ೬೭% ಸ್ವಂತ ಮನೆ ಹೊಂದಿದ್ದಾರೆ ೪೬% ಸ್ವಂತ ವಾಹನ ಹೊಂದಿದ್ದಾರೆ ಎಂದು ಹೇಳಿದೆ. ೨೦೦೮ ಸಮಯದಲ್ಲಿ ಅಂದಾಜಿಸಿದ್ದ ಜನಸಂಖ್ಯೆ ೨,೬೦೦,೦೦೦, ನೆರೂಲ್ ಮತ್ತು ವಾಶಿ ಘಟಕಗಳು ನಗರದ ಅತಿ ಹೆಚ್ಚು ಜನಸಂಖ್ಯೆ ಹೊಂದಿವೆ. ನೆರೂನ್ ಹೊಸ ಮುಂಬಯಿಯ ಹೆಚ್ಚು ಜನದಟ್ಟಣೆ ಪ್ರದೇಶವಾಗಿದೆ, ಅಂದಾಜಿಸಿದ ಜನಸಂಖ್ಯೆ ೮೦೦,೦೦೦,ವಾಶಿ ಕೂಡ ಅನುಸರಿಸುತ್ತದೆ, ಅಂದಾಜಿಸಿದ ಜನಸಂಖ್ಯೆ ೭೦೦,೦೦೦. ಮುಂಬಯಿಯ ಪ್ರತಿ ತಿಂಗಳ ರೂ. ೫೦೦೦/ ವರಮಾನಕ್ಕೆ ಹೋಲಿಸಿದರೆ ಹೊಸ ಮುಂಬಯಿಯ ಕುಟುಂಬಗಳ ಸರಾಸರಿ ವರಮಾನ ಪ್ರತಿ ತಿಂಗಳಿಗೆ ರೂ. ೯೫೪೯/. ವಾಶಿಯ ಪ್ರತಿ ತಿಂಗಳ ಅತಿ ಹೆಚ್ಚು ವರಮಾನ ರೂ. ೧೨,೩೪೯/, ನೆರೂಲ್ ಕೂಡ, ರೂ. ೧೧,೯೯೮/ ಪ್ರತಿ ತಿಂಗಳಿಗೆ. === ಧರ್ಮ === ಹೊಸ ಮುಂಬಯಿ ವಿಶಾಲ ದೃಷ್ಟಿಯ ನಗರ ಮತ್ತು ವಿವಿಧ ಧರ್ಮದ ಜನರು ಸ್ನೇಹ ಭಾವದಿಂದ ಜೊತೆಯಾಗಿ ಬದುಕುತ್ತಿದ್ದಾರೆ. ಜನಸಂಖ್ಯೆಯ ಬಹುಪಾಲು ಹಿಂದೂಗಳು. (೮೬%), ಮುಸ್ಲಿಂ (೧೦%), ಹಾಗೆಯೇ ಕ್ರಿಸ್ಚಿಯನ್ ಮತ್ತು ಸಿಖ್ ಜನರು. ಇದಕ್ಕೆ ಉತ್ತಮ ಉದಾಹರಣೆ ಬ್ರಹ್ಮಗಿರಿ, ಸಿಡ್ಕೊ ಯೋಜಿಸಿದ ದಾರಿಯಲ್ಲಿ ನೆರೂಲ್‌ನ ರೈಲು ನಿಲ್ದಾಣದ ಪಶ್ಚಿಮ ಭಾಗದ ಬೆಟ್ಟ ಪ್ರದೇಶದ ಭೂಮಿಯನ್ನು ಧಾರ್ಮಿಕ ಚಟುವಟಿಕೆಗಳಿಗೆ ಮೀಸಲಿಟ್ಟಿದೆ. ಈ ಪ್ರದೇಶವು ಬಾಲಾಜಿ ದೇವಸ್ಥಾನ, ಸ್ವಾಮಿನಾರಾಯಣ ದೇವಸ್ಥಾನ ಸಮುಚ್ಛಯ,(ಮಠ ) ಅಮಿರ್ತಾನಂದಮಯಿದೇವಸ್ಥಾನ ಸಮುಚ್ಛಯ, ನಾರಾಯಣಗುರು ದೇವಸ್ಥಾನ ಸಮುಚ್ಛಯ, ಲಿಟ್ಲ್ ಫ್ಲವರ್ ಚರ್ಚ್ ಮತ್ತು ಎಪ್ವರ್ಥ್ ಮೆಥೊಡಿಸ್ಟ್ ತಮಿಳ್ ಚರ್ಚ್ ಹೊಂದಿದೆ. ಈ ಎಲ್ಲ ಧಾರ್ಮಿಕ ಸಂಸ್ಥೆಗಳು ಹೊಸ ಮುಂಬಯಿ ಜನರಿಂದ ಮಾತ್ರವಲ್ಲದೇ ಮುಂಬಯಿ ನಗರದ ಜನರಿಂದಲೂ ಪೋಷಿತವಾಗುತ್ತಿದೆ. ಎಸ್‌ಐಇಎಸ್ ಸಮುಚ್ಚಯದ ಒಳಗೆ, ನೆರೂಲ್ (ಇದು ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ವೇ ಗೆ ಹತ್ತಿರದ ಸ್ಥಳವಾಗಿದೆ ) ಅಂಜನೇಯರ್ (ಹನುಮಂತ ದೇವರು) ದೇವಸ್ಥಾನ, ಕಾಮಾಕ್ಷಿ ಅಮ್ಮನ್ ದೇವಸ್ಥಾನ ಮತ್ತು ಆದಿಶಂಕರರ್ ಮಂಡಪ್ ದೇವಸ್ಥಾನಗಳಿವೆ. ಆಂಜನೇಯರ್ ಮೂರ್ತಿಯು ೧೦ ಮೀಟರ್ ಎತ್ತರವಿದ್ದು ೩.೬ ಮೀಟರ್ ಎತ್ತರದ ಪಾದಪೀಟದ ಮೇಲೆ ಪ್ರತಿಷ್ಠಾಪಿಸಲಾಗಿದೆ ಒಟ್ಟಾರೆ ಎತ್ತರ ೧೩.೬ ಮೀಟರ್‌ಗಳು. ಇದನ್ನು ಗ್ರಾನೈಟ್‌ನ ಏಕಶಿಲೆಯಿಂದ ಮಾಡಲಾಗಿದೆ. ಶೀಘ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಸಾಲಿನಲ್ಲಿರುವ ಹೊಸ ಮುಂಬಯಿ ,ಇಂದು ನಗರದಲ್ಲಿ ಪೂಜಿಸಲು,ಸಹಭಾಗಿಯಾಗಲು ಮತ್ತು ಸೇವೆಗಾಗಿ ವಿಶಾಲವಾದ ಧಾರ್ಮಿಕ ಕ್ಷೇತ್ರಗಳಿವೆ. ಕಾರ್ಘರ್‌ನಲ್ಲಿ ಹಲವಾರು ದೇವಸ್ಥಾನಗಳನ್ನು ಕಟ್ಟಲಾಗಿದೆ. ವಿವಿಧ ಧಾರ್ಮಿಕ ಪಂಗಡಗಳ ಚರ್ಚ್‌ಗಳು ವಿವಿಧ ಘಟಕಗಳಲ್ಲಿ ನಿರಂತರವಾಗಿ ಸೇವೆ ನೀಡಲು ಪ್ರಾರಂಭಿಸಿವೆ. ಗೌರವಯುತವಾದ ಸಂಸ್ಥೆಗಳಿಂದ ವಿವಿಧ ಸಾಂಸ್ಕೃತಿಕ ಸಂದರ್ಭಗಳನ್ನು /ಧರ್ಮಗಳ ಹಬ್ಬಗಳ ಆಚರಣೆ ಮತ್ತು ಸಂದರ್ಭಗಳನ್ನು ಏರ್ಪಡಿಸಲಾಗುತ್ತದೆ. === ಭಾಷೆ === ಹೊಸ ಮುಂಬಯಿ ಅಗ್ರಿ ಮತ್ತು ಕೋಲಿ ಜನಸಂಖ್ಯೆಯನ್ನು ಹೊಂದಿದೆ. ಹೊಸ ಮುಂಬಯಿಯ ಹೆಚ್ಚು ಕಡೆ ಮಹಾರಾಷ್ಟ್ರ ರಾಜ್ಯದ ಅಧೀಕೃತ ಭಾಷೆಯಾದ ಮಾರಾಠಿ ಭಾಷೆಯನ್ನು ವ್ಯಾಪಕವಾಗಿ ಮಾತನಾಡುತ್ತಾರೆ. ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ವ್ಯವಹಾರವನ್ನು ಮರಾಠಿಯಲ್ಲಿ ನಿರ್ವಹಿಸಲಾಗುತ್ತದೆ. ನಗರದ ರಸ್ತೆಗಳಲ್ಲಿ ಸಾಮಾನ್ಯವಾಗಿ ಮುಂಬಯಿಯಾ ಹಿಂದಿ ಅಥವಾ ಬಾಂಬಾಯಿಯಾ ಹಿಂದಿ – ಹಿಂದಿ, ಉರ್ದು ಮತ್ತು ಮರಾಠಿ ಭಾಷೆಗಳ ಮಿಶ್ರಣ ಮತ್ತು ಆಡುಮಾತಿಗಾಗಿ ಶೋಧಿಸಿದ ಕೆಲವು ಶಬ್ದಗಳನ್ನು ಮಾತನಾಡುತ್ತಾರೆ. ಇಂಗ್ಲೀಶ್ ಕೂಡ ವ್ಯಾಪಕವಾಗಿ ಮಾತನಾಡುತ್ತಾರೆ, ಮತ್ತು ನಗರದ ಬಿಳಿ ಕಾಲರ್ ಉದ್ಯೋಗಿಗ ಕೆಲಸದ ಭಾಷೆಯಾಗಿದ್ದು ಯುವ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. == ಶಿಕ್ಷಣ == ೧೧ ತಾಂತ್ರಿಕ ಕಾಲೇಜುಗಳು,೨ ವೈಧ್ಯಕೀಯ ಕಾಲೇಜುಗಳು,೩ ವಾಸ್ತುಶಾಸ್ತ್ರ ೬೨ ಶಾಲೆಗಳಿವೆ. ಎನ್‌ಎಂಎಂಸಿ ಪ್ರದೇಶದಲ್ಲಿ ೧೨೮ ಪ್ರಾಥಮಿಕ ಶಾಲೆಗಳು, ೮೦ ಮಾಧ್ಯಮಿಕ ಶಾಲೆಗಳು ಮತ್ತು ೨೫ ಕಾಲೇಜುಗಳಿವೆ. ಹೊಸ ಮುಂಬಯಿ ಉನ್ನತ ಶಿಕ್ಷಣ ಸೌಲಭ್ಯಗಳಲ್ಲಿ ಸ್ವ ಯೋಗ್ಯತೆ ಪಡೆದಿದೆ- ಕೇವಲ ೪% ರಷ್ಟು ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣಕ್ಕಾಗಿ ಮುಂಬಯಿಗೆ ಹೋಗುತ್ತಾರೆ. == ಸಾರಿಗೆ == ಹೊಸ ಮುಂಬಯಿ ಸಾರಿಗೆಯಲ್ಲಿ ಕೆಂಪು ಎನ್‌ಎಂಎಂಟಿ ಬಸ್ಸುಗಳು ಮತ್ತು ಸಬ್‍ಅರ್ಬನ್ ರೈಲುಗಳು ಸಾಮಾನ್ಯವಾಗಿವೆ. ಎನ್ಎಂಎಂಟಿಯಿಂದ ಕಾರ್ಯನಿರ್ವಹಿಸುವ ಹೊರತಾಗಿ‌ ಎನ್‌ಎಂಎಂಟಿ ಬೃಹನ್‌ಮುಂಬಯಿ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಬಸ್ಸುಗಳಿಗೆ ಸಮೀಪವಾಗಿದೆ . ಆಟೋ ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಕೂಡ ಸಾರಿಗೆ ಪದ್ಧತಿಯಲ್ಲಿ ಪ್ರಸಿದ್ಧವಾಗಿದೆ. ಮುಲುಂದ್-ಏರೋಲಿ ಸಂಪರ್ಕದಿಂದ, ಪ್ರಸ್ತುತ ಮಧ್ಯಭಾಗಕ್ಕೆ ಎನ್‌ಎಂಎಂಟಿ ಮೂಲಕ ಅಥವಾ ಬೆಸ್ಟ್ ಬಸುಗಳಿಂದ ಮುಲುಂದ್‌ಗೆ ತ್ವರಿತ ಮಾರ್ಗವಾಗಿದೆ. ಪ್ರತಿಯೊಂದು ಒಳಗಡೆಯು ಆಟೋ ರಿಕ್ಷಾ ಸಾರಿಗೆ ಪದ್ಧತಿಯಲ್ಲಿ ಇಷ್ಟಪಡುತ್ತಾರೆ. ಹಳದಿ ಮತ್ತು ಕಪ್ಪು ಟ್ಯಾಕ್ಸಿಕ್ಯಾಬ್‌ಗಳು ಗೊತ್ತುಪಡಿಸಿದ ಟ್ಯಾಕಿಸ್ಟ್ಯಾಂಡ್‌ಗಳಿಂದ ಮುಂಬಯಿ ಮತ್ತು ಥಾನೆಯಂತಹ ಹೆಚ್ಚಿನ ದೂರದ ಪ್ರಯಾಣಕ್ಕೆ ಒದಗುತ್ತವೆ. ಕೂಲ್‌ಕ್ಯಾಬ್ಸ್ ಕೂಡ ಲಭ್ಯವಿದೆ. ಆರ್‌ಟಿಓದಿಂದ ನಿಶ್ಚಯಿಸಲ್ಪಟ್ಟ ಟ್ಯಾಕ್ಸಿ ದರವನ್ನು ಒಪ್ಪಿಕೊಳ್ಳಲಾಗಿದೆ . ಮುಂಬಯಿಯ ಸಬ್‌ಅರ್ಬನ್ ರೈಲು ಜಾಲವು ನಗದ ಹೆಚ್ಚಿನ ಜನದಟ್ಟಣೆಯ ಪ್ರದೇಶವನ್ನು ಸುತ್ತುವರೆಯುತ್ತದೆ. ಈ ಪ್ರದೇಶದ ಪ್ರಮುಖ ಹೊರಭಾಗದ ರೈಲು ನಿಲ್ದಾಣಗಳು ವಾಶಿ, ಬೆಲಾಪೂರ್ ಮತ್ತು ಪನ್ಚೇಲ್. ಥಾನೆ-ನೆರೂಲ್-ಉರಲ್ ಸಂಪರ್ಕವು ಪ್ರಾರಂಭವಾದ ನಂತರ ನೆರೂಲ್ ಕೂಡ ಪ್ರಮುಖ ಹೊರಭಾಗದ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣಗಳನ್ನು ಪ್ರಮುಖ ರೈಲು ಜಂಕ್ಷನ್ ಆಗಿ ಮಾಡಲು ಯೋಜಿಸಲಾಗಿದೆ. ಕೊಂಕಣ ರೈಲ್ವೆಯಲ್ಲಿ ಚಲಿಸುವ ಹೆಚ್ಚಿನ ರೈಲುಗಳು ಪನ್ವೇಲ್ ನಲ್ಲಿ ನಿಲ್ಲುತ್ತವೆ ಏಕೆಂದರೆ ಮುಂಬಯಿಯಿಗೆ ಹೋಗಬೇಕಾದ ಪ್ರಯಾಣಿಕರಿಗೆ ಅಲ್ಲಿ ಸ್ಥಳೀಯ ರೈಲುಗಳು ಸಿಗುತ್ತವೆ. ಈ ರೈಲುಗಳು ಪೂರ್ಣಗಾಗಿ ದ್ವೀಪ ನಗರದ ಬಳಸುಮಾರ್ಗ ಬಳಸುತ್ತವೆ . ಮುಂಬರುವ ದಿನಗಳಲ್ಲಿ ಮುಂಬಯಿ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಕಾರ್ಜತ್ ಮೂಲಕ ನಿಲ್ದಾಣವನ್ನು ಪುಣೆಗೆ ಸಂಪರ್ಕಿಸುವ ಯೋಜನೆಯಿದೆ. ಸೆಂಟ್ರಲ್ ರೇಲ್ವೆಯ ಥಾನೆ-ವಾಶಿ ಕಾರಿಡಾರ್ ಹಾರ್ಬರ್ ಲೈನ್ ಮೇಲೆ ನವೆಂಬರ್ ೯ 2004ರಂದು ಕಾರ್ಯನಿರ್ವಹಿಸುತ್ತಿದೆ. ರೈಲುಗಳು ೧೮.೫ ಕಿಮೀಯನ್ನು ವಾಶಿ, ಸನ್ಪದ, ತುರ್ಬೆ, ಕೋಪರ್ ಕೈರನೆ, ಘಾನ್ಸೋಲಿ, ರಬಾನೆಮತ್ತು ಏರೋಲಿ, ಥಾನೆ ನಡುವೆ ಸಂಚರಿಸುತ್ತವೆ. ಥಾನೆ ಮತ್ತು ಕುರ್ಲಾ ನಡುವೆ ಹೆಚ್ಚಿನ ಜೋಡಿ ಹಳಿ ಹಾಕಲು ಕೆಲಸ ನಡೆಯುತ್ತಿದೆ- ರಿಂಗ್ ರೈಲು ಮಾರ್ಗಕ್ಕಾಗಿ ೫ನೇಯ ಮತ್ತು ೬ನೇಯ ಕಾರಿಡಾರ್ : ಥಾನೆ-ಕುರ್ಲಾ-ವಾಶಿ-ಥಾನೆ. ಕಾರ್ಜತ್ ಮತ್ತು ಪನ್ವೇಲ್ ನಡುವೆ ಹೊಸ ಬ್ರಾಡ್‌ಗೇಜ್ ಹಾರ್ಬರ್ ಲೈನ್ ಕಾರ್ಯಸಮರ್ಥವಾಗಿದೆ. ಬೆಸ್ಟ್ ಬಸ್‌ನ ೫೦೦ ಸರಣಿಯು ಮುಂಬಯಿ ಮತ್ತು ಹೊಸ ಮುಂಬಯಿ ನಡುವೆ ಸಂಚರಿಸುತ್ತವೆ. ಉದಾಹರಣೆಗೆ, ಬೆಸ್ಟ್ ಮಾರ್ಗ ೫೦೫ ಹೊಸ ಮುಂಬಯಿಯ ಸಿಬಿಡಿಯಿಂದ ಪ್ರಾರಂಭಿಸುತ್ತದೆ ಮತ್ತು ಮುಂಬಯಿಯ ಬಾಂದ್ರಾದಲ್ಲಿ ಕೊನೆಯಾಗುತ್ತದೆ, ಮತ್ತು ಪ್ರತಿಯಾಗಿ. ೫೦೬, ೫೦೭, ೫೧೧, ೫೧೨ ನಂತಹ ಇತರೆ ಮಾರ್ಗವು ನಿತ್ಯಪ್ರಾಯಾಣಿಕರನ್ನು ಹೊಸ ಮುಂಬಯಿಯ ನೆರೂಲ್‌ನಿಂದ ಮುಂಬಯಿಗೆ ಮತ್ತು ವಾಪಸ್ ಕರೆದೊಯ್ಯುತ್ತದೆ.ಹೊಸ ಮುಂಬಯಿಯ ಜನರಿಗೆ ಎನ್‌ಎಂಎಂಟಿ ಮತ್ತು ಬೆಸ್ಟ್ ಎಸಿ ಬಸ್ಸುಗಳು ಲಭ್ಯವಿದೆ. ೧೦ ಕಿಮೀ ಉದ್ದದ ಪಾಮ್ ಬೀಚ್ ಮಾರ್ಗ (ಮಾರ್ಗ್ ಅನುವಾದಿಸಿದಾಗ ಮರಾಠಿಯಲ್ಲಿ ರೋಡ್ ) ಆರು-ಪಥದ ಆಧುನಿಕ ರಸ್ತೆ ವಾಶಿಯಿಂದ ಸಿಬಿಡಿ-ಬೆಲಾಪೂರಿಗೆ ಸಂಪರ್ಕ ಕಲ್ಪಿಸಿ ಸಮಾನಾಂತರವಾಗಿ ಥಾನೆ ಕೊಲ್ಲಿಗೂ ಸಾಗುತ್ತದೆ. ಇದು ಮರಿನ್ ಡ್ರೈವ್‌ನ ಅವಳಿಯಾಗಿದೆ. ಕೋಪರ್ ಕೈರನೆಯಿಂದ ಮುಂಬಯಿಯ ವಿಕ್ರೋಲಿಯ ಕನ್ನಮ್‌ವಾರ್‌ಗೆ ಥಾನೆ ಕೊಲ್ಲಿಯ ಮೂಲಕ ಹೊಸ ಸೇತುವೆಗಾಗಿ ಬೇಡಿಕೆ ಹೆಚ್ಚಾಗಿದೆ, ಏಕೆಂದರೆ ಇದು ಮುಂಬಯಿಯ ಪೂರ್ವದ ಉಪನಗರಗಳನ್ನು ಕೂಡಿಸುತ್ತದೆ. ಇದು ಮುಂಬಯಿ ಮತ್ತು ಹೊಸ ಮುಂಬಯಿ ಸಂಪರ್ಕಿಸಲು ಸ್ಥಾಪಿತವಾಗುವ ಬಹು ಅಪೇಕ್ಷಿತ ಸೇತುವೆಯಾಗಿದೆ. ಹೊಸ ಮುಂಬಯಿ ಕೂಡ ಭಾರತದಲ್ಲಿನ ಪ್ರಗತಿಯಾದ ಬಂದರು ಎಂಬ ಹೆಮ್ಮೆಯಿದೆ, ಉರೂನ್ ಸಮೀಪದ ನವ ಸೇನಾದಲ್ಲಿನ ಜವಾಹಾರ್ಲಾಲ್ ನೆಹರು ಬಂದರು. ಇದು ರಸ್ತೆ ಮತ್ತು ರೈಲುಗಳನ್ನು ಸಂಪರ್ಕಿಸುತ್ತದೆ,ಮತ್ತು ಭಾರತದ ಹೆಚ್ಚು ಕಡಿಮೆ ೬೫% ಟ್ರಾಫಿಕ್ ನಿಭಾಯಿಸುತ್ತದೆ. ಹೊಸ ಮುಂಬಯಿಯಿಂದ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನನಿಲ್ದಾಣ ಕೇವಲ ೩೦ ಕಿಮೀ ದೂರವಿದೆ ಸದ್ಯ ಇದು ನಗರಕ್ಕೆ ಅಂತರಾಷ್ಟ್ರೀಯ ವಿಮಾನನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ , ಆದರೆ ಪರಿಸ್ಥಿಯು ಬಹು ಬೇಗ ಬದಲಾಗಿ ಹೊಸ ಮುಂಬಯಿ ಅಂತರಾಷ್ಟ್ರೀಯ ವಿಮಾನನಿಲ್ದಾಣ ಬರುತ್ತಿದೆ. == ಹೊಸ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ == ಹೊಸ ಮುಂಬಯಿಯ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಪ್ರಾ-ಪನ್ವೇಲ್ ಪ್ರದೇಶವನ್ನು ಗುರುತಿಸಲಾಗಿದೆ. ಸಾರ್ವಜನಿಕ -ಖಾಸಗಿ ಸಹಭಾಗಿತ್ವದ ಮೂಲಕ ನಿರ್ಮಾಣ (ಪಿಪಿಪಿ) — ಖಾಸಗಿ ವಲಯದ ಸಹಭಾಗಿಗಳು ಸಮವಾಗಿ ೭೪% ಹಿಡಿತ ಹೊಂದಿರುರುತ್ತಾರೆ ಮತ್ತು ಭಾರತಿಯ ವಿಮಾನನಿಲ್ದಾಣ ಪ್ರಾಧಿಕಾರ (ಎ‌ಎಐ) ಮತ್ತು ಮಹಾರಾಷ್ಟ್ರ ಸರ್ಕಾರ ( ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ ಅಥವಾ ಸಿಡ್ಕೊ ಮೂಲಕ),ಪ್ರತಿಯೊಬ್ಬರು ೧೩% ಹಿಡಿತ ಹೊಂದಿರುತ್ತಾರೆ. ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ)ಈಗಾಗಲೇ ಹೊಸ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟೆಕ್ನೊ-ಕಾರ್ಯಸಾಧ್ಯತೆ ಅನುಮತಿ ನೀಡಿದೆ. ಕೇಂದ್ರ ಸರ್ಕಾರ ೩೧, ೨೦೦೭ರಂದು ಹೊಸ ಮುಂಬಯಿಯಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಚಿವ ಸಂಪುಟದ ಒಪ್ಪಿಗೆ ನೀಡಿದೆ. ನಿಷ್ಣಾತರಾದ ಸಲಹಾಕಾರರನ್ನು ನಿಯೋಜಿಸಲಾಗಿದೆ ಮತ್ತು ಜಾಗತಿಕ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಗಳು ಈಗಲೂ ಭೂಮಿ ವಶಪಡಿಸಿಕೊಳ್ಳಲು ಯೋಜಿಸುತ್ತಿದ್ದಾರೆ. ಪರಿಣಾಮವಾಗಿ ಕೋಪ್ರಾ ಪನ್ವೇಲ್ ಪ್ರದೇಶದ ಸಮೀಪ ಹೊಸ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೊತ್ತುಪಡಿಸಿದ ಸ್ಥಳಕ್ಕೆ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಪ್ರಸ್ತುತ ಅಕ್ಷೇಪಣೆ ಹೆಚ್ಚಾಗಿದೆ, ಏಕೆಂದರೆ ನಿರ್ಮಾಣವಾಗುವ ವಿಮಾನ ನಿಲ್ದಾಣ ತಗ್ಗಿನ ಪ್ರದೇಶ, ಪರಿಸರದ ಸೂಕ್ಷ್ಮ ವಲಯ ಒಳಗೊಂಡಿದ್ದು ಹಾಗೆಯೇ ಹಲವಾರು ಏಕರೆ ಮ್ಯಾಂಗ್ರೋವ್ ನಾಶವಾಗುತ್ತವೆ,ಇತರೆ ಪ್ರದೇಶಗಳನ್ನು ಪರಿಗಣಿಸಲು ಪ್ರಾರಂಭವಾಗಿದೆ,ಇವುಗಳಲ್ಲಿ ಒಂದು ಕಲ್ಯಾಣ್ ಸಮೀಪದ ನೇವಲಿ ಹಳ್ಳಿ ,ಮುಂಬಯಿಯಲ್ಲಿ ಈಗಿರುವ ವಿಮಾನ ನಿಲ್ಡಾಣದಿಂದ ೫೫ ಕಿಮೀ ದೂರವಿದೆ. ಇದಕ್ಕೆ ಗುರುತಿಸಿದ ಸ್ಥಳದಲ್ಲಿ ವಿಶ್ವಯುದ್ಧ ಕಾಲದ ಹಳೆಯ ಮತ್ತು ಕೈಬಿಡಲಾದ ವಿಮಾನ ನಿಲ್ದಾಣ ಅಸ್ತಿತ್ವದಲ್ಲಿದೆ ಮತ್ತು ರಕ್ಷಣಾ ಸಚಿವಾಲಯದ ೧,೫೦೦ ಏಕರೆ (೬.೧ ಕಿಮೀ೨) ಭೂಮಿ ಇದೆ. ಈಗ ಪ್ರಸ್ತಾವನೆಯು ಈ ೧,೫೦೦ ಏಕರೆ ಭೂಮಿಯ ಮಧ್ಯೆ ಸುತ್ತುತ್ತಿದೆ (೬.೧ ಕಿಮೀ೨) ಈಗ ಗುರುತಿಸಲಾದ ಕೋಪ್ರಾ ಪನ್ವೇಲ್‌ ಮೂಲಕ ಹೋಗುವುದಿಲ್ಲ, ನಂತರ ಕಲ್ಯಾಣ್-ನೆವಲಿ ಸ್ಥಳವನ್ನು ಮುಂಬರುವ ದಿನಗಳಲ್ಲಿ ಮುಂಬಯಿ ಮಹಾನಗರದ ಎರಡನೇಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಂದು ಪರಿಗಣಿಸಲಾಗಿದೆ. == ಮೂಲಭೂತ ಸೌಕರ್ಯ == ಮೂಲ ಮೂಲಭೂತ ಸೌಕರ್ಯಕ್ಕಾಗಿ ರೂ.೪೦,೦೦೦ ಮಿಲಿಯನ್ (ಯುಎಸ್$೧.೧೪ ಬಿಲಿಯನ್) ಈಗಾಗಲೇ ಇರಿಸಲಾಗಿದೆ. ನ್ಯಾಷನಲ್ ಜಿಯಾಗ್ರಫಿ ಚ್ಯಾನೆಲ್ ಹೊಸ ಮುಂಬಯಿಯನ್ನು ಪ್ರಪಂಚದ ಉತ್ತಮ ನಗರಗಳಲ್ಲಿ ಒಂದೆಂದು ಘೋಷಿಸಿದೆ . ವಿವಿಧ ಮೂಲಗಳಿಂದ ವಿಧ್ಯುತ್‌ನ್ನು ವಿಶ್ವಾಸಾರ್ಹವಾಗಿ ಸರಬರಾಜು ಮಾಡಲಾಗುತ್ತದೆ ಮತ್ತು ಉತ್ಯುತ್ತಮ ಚಾಲನೆ ಸ್ಥಿತಿಯಲ್ಲಿರುವ ರಸ್ತೆಗಳು, ಜೊತೆಗೆ ಹಲವಾರು ಮೇಲ್ಸೆತುವೆಗಳು, ವಿಶಾಲವಾದ ರಸ್ತೆಗಳು, ಮತ್ತು ವಾಹನ ನಿಲುಗಡೆ ಸ್ಥಳಗಳು ಇವೆ ಎಂಬ ಹೆಮ್ಮೆಯಿದೆ. ನಿವಸಿಗಳ ಮುಖ್ಯ ಸಮಸ್ಯೆ ಎಂದರೆ ಮುಂಬಯಿ ಜೊತೆಗೆ ಸಂಪರ್ಕ ಕಡಿಮೆ ಎಂಬುದು , ನಗರಗಳ ನಡುವೆ ಕೇವಲ ಎರಡು ರಸ್ತೆ ಸಂಪರ್ಕಗಾಳು ಮತ್ತು ಒಂದು ರೈಲು ಹಳಿ ಮಾತ್ರವಿದೆ. ವಾಶಿ ಯಿಂದ ಕೋಲಬಾ ವರೆಗೆ ಹೋವರ್‌ಕ್ರಾಫ್ಟ್ ಸೇವೆ ಇದೆ ಮತ್ತು ಸಿಬಿಡಿಯಿಂದ ಕೋಬಲಾ ಇಲ್ಲಿ ಇನ್ನು ಉಪಯೋಗಿಸಲಾಗುತ್ತಿದೆ,ಆದರೆ ದುಬಾರಿಯಾದ ಟಿಕೇಟ್ ಮತ್ತು ನಿರ್ವಹಣೆಯ ಕಾರಾಣದಿಂದ ಯಶಸ್ವಿಯಾಗಲಿಲ್ಲ.ವಾಶಿಯಿಂದ , ಬೆಲಾಪೂರ್, ಮತ್ತು ನೆರೂಲ್ ಮತ್ತು ಏರೋಲಿ ಯಿಂದ ಗೇಟ್‌ವೇ ಆಫ್ ಇಂಡಿಯಾದ ವರೆಗೆ ಸಿಡ್ಕೊ ಮತ್ತೆ ಹೋವರ್‌ಕ್ರಾಫ್ಟ್ ಸೇವೆಯನ್ನು ಪ್ರಾರಂಭಿಸಲು ಯೋಜಿಸಿದೆ. == ಸೇವೆಗಳು == ಹೊಸ ಮುಂಬಯಿಯಲ್ಲಿ ಸಾಕಾಗುವಷ್ಟು ಉಪಯುಕ್ತ ಸೇವೆಗಳು,ಬ್ಯಾಂಕ್‌ಗಳು ರೆಸ್ಟೋರೆಂಟ್‌ಗಳು,ಮಾಲ್‍ಗಳು,ಮಲ್ಟಿ‌ಫ್ಲೆಕ್ಸ್‌ಗಳು ಮತ್ತು ಇತರೆ ಅಂಗಡಿಗಳಿವೆ. ಸೆಂಟರ್ ಒನ್,ಪಾಮ್ ಬೀಚ್ ಗ್ಯಾಲರಿಯಾ,ಸಿಟಿ ಸೆಂಟರ್,ರಘುಲೀಲಾ ಮತ್ತು ಇನಾರ್ಬಿಟ್ ಮಾಲ್ ನಂತಹ ಉನ್ನತ ವ್ಯಾಪ್ತಿಯ ಮಾಲ್‌ಗಳು ವಾಶಿಯಲ್ಲಿವೆ. ಪಾಮ್ ಬೀಚ್ ರಸ್ತೆ, ನೆರೂಲ್ ಮತ್ತು ಕಾರ್ಘರ್ ಕೂಡ ಮಾಲ್ ಮತ್ತು ಮಲ್ಟಿಫ್ಲೆಕ್ಸ್‌ಗಳ ನಿರ್ಮಾಣಕ್ಕೆ ಸಾಕ್ಷಿಯಾಗಿವೆ. ಹೊಸ ಮುಂಬಯಿ ಸೂಪರ್‌ಮಾರ್ಕೇಟ್ ಮತ್ತು ಅಪ್ನಾ ಬಝಾರ್, ಮೋರ್,ಸ್ಪೇನ್ಸರ್ಸ್,ರಿಲಯನ್ಸ್ ಫ್ರೆಶ್,ಸ್ಪಿನಾಚ್ ಮತ್ತು ಫೇರ್‌ಫ್ರೈಸ್ ನಂತಹ ಮಾಲ್‌ಗಳ ಮೂಲಕ ನಿವಾಸಿಗಳ ಶಾಪಿಂಗ್ ಅವಶ್ಯಕತೆಗಳನ್ನು ಪೂರೈಸುತ್ತವೆ. ಪಾಂಚಾಲಿ ಫರ್ನಿಚರ್ ಹೊಸ ಮುಂಬಯಿಯ ಒಂದು ಅತಿ ಹಳೆಯ ಮತ್ತು ಗೌರವಯುತವದ ಫರ್ನಿಚರ್ ಬ್ರ್ಯಾಂಡ್ ಆಗಿದೆ. ಡಿಮಾರ್ಟ್ ಹೊಸ ಮುಂಬಯಿಯಲ್ಲಿ ಐದು ಹೈಪರ್‌ಮಾಲ್‌ಗಳನ್ನು ಪ್ರಾರಂಭಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಸಾರಸ್ವತ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಹೈದ್ರಾಬಾದ್, ಸಿಟಿಬ್ಯಾಂಕ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ನಂತಹ ಪ್ರಮುಖ ಬ್ಯಾಂಕ್‌ಗಳು ಹೊಸ ಮುಂಬಯಿಯ ಸುತ್ತಮುತ್ತ ತಮ್ಮ ಶಾಖೆಗಳನ್ನು ಮತ್ತು ಎಟಿಎಂಗಳನ್ನು ಹೊಂದಿವೆ. ಭಾರತೀಯ ರಿಜರ್ವ್ ಬ್ಯಾಂಕ್ ೨೦೦೧ರಿಂದ ಹೊಸ ಮುಂಬಯಿಯ ಜನರಿಗೆ ಸೇವೆ ಸಲ್ಲಿಸುತ್ತಿದೆ. ಹೊಸ ಮುಂಬಯಿಯಲ್ಲಿ ಹಲವಾರು ರೆಸ್ಟೊರೆಂಟ್ಸ್‌ಗಳಿವೆ. ಹೊಸ ಮುಂಬಯಿ ರೆಸ್ಟೋರೆಂಟ್ಸ್‌ಗಳಿಗೆ ಹೋಲಿಸಿದಾಗ ಮುಂಬಯಿ ಹೆಚ್ಚು ಪ್ರಸಿದ್ಧವಾಗಿವೆ. ಹೊಸ ಮುಂಬಯಿ ಕೆಲವೇ ತ್ರಿತಾರ ಮತ್ತು ಪಂಚತಾರಾ ಹೋಟೆಲ್ ಹೊಂದಿದೆ. ಹಾಗಿದ್ದಾಗ್ಯೂ, ೨೦೧೨ರಲ್ಲಿಹೊಸ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೂರ್ಣಗೊಳ್ಳುವ ಜೊತೆಗೆ,ನೆರೂಲ್,ಪನ್ವೇಲ್,ಕಾರ್ಘರ್,ಮತ್ತು ಸಿಬಿಡಿ ಬೆಲಾಪೂರ್ ನಂತಹ ಘಟಕಗಳು ಹಲವಾರು ಪಂಚತಾರ ಐಶಾರಾಮಿ ಹೋಟೆಲ್ ಹೊಂದುವ ನಿರೀಕ್ಷೆಯಿದೆ . == ವಾಣಿಜ್ಯ == ಮಹಾರಾಷ್ಟ್ರಲ್ಲಿರುವ ಹೆಚ್ಚಿನ ಎಲ್ಲಾ ಸಾಫ್ಟ್‌ವೇರ್ ಕಂಪನಿಗಳು ನವೀ ಮುಂಬಯುಯಲ್ಲಿ ಕಛೇರಿ ಹೊಂದಿವೆ. ಬೆಳೆಯುತ್ತಿರುವ ಬೇಡಿಕೆಗೆ ಮಹಾರಾಷ್ಟ್ರ ಸರ್ಕಾರ ಕೂಡ ಸಾಫ್ಟ್‌ವೇರ್ ಪಾರ್ಕ್ ನೆರವು ನೀಡಿದೆ. ಇಲ್ಲಿ ಹಲವಾರು ದೊಡ್ಡ ಸಂಸ್ಥೆಗಳು ಕೂಡ ತಮ್ಮ ಕಛೇರಿ ಹೊಂದಿವೆ. ರಿಲಯನ್ಸ್ ಗ್ರುಪ್‌ನ ಕೈಗಾರಿಕೆಗಳು ಪ್ರಮುಖವಾಗಿ ಕೋಪರ್ ಕೈರನೆ ಮತ್ತು ಮಹಾಪೆಯಲ್ಲಿ (ಡಿಎಕೆಸಿ) ಇವೆ. ಇತರ ಪ್ರಮುಖ ಕಂಪನಿಗಳು ಕೋರ್ ಪ್ರೊಜೆಕ್ಟ್ಸ್ & ಟೆಕ್ನಾಲಜಿ ಲಿಮಿಟೆಡ್, ಹೆಕ್ಸಾವೇರ್ ಟೆಕ್ನಾಲಜಿಸ್, ಮಸ್ಟೆಕ್, ಪತ್ನಿ ಕಂಪ್ಯೂಟರ್ ಸಿಸ್ಟಮ್ಸ್, ಇಂಟೆಲ್ಲೆನೆಟ್, ಹೆವಿಟ್ ಅಸೋಸಿಯೇಟ್ಸ್, ಟಿಸಿಎಸ್, ಡಿಜಿಟ್ ಮ್ಯಾಗಜೀನ್ , ವಿ2ಸೊಲ್ಯೂಷನ್ಸ್, ಐಆರ್‌ಐಎಸ್ ಬಿಜಿನೆಸ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ 2009-02-27 ವೇಬ್ಯಾಕ್ ಮೆಷಿನ್ ನಲ್ಲಿ., ಇಂಡಿಯಾಗೇಮ್ಸ್ 2019-09-26 ವೇಬ್ಯಾಕ್ ಮೆಷಿನ್ ನಲ್ಲಿ., & ಕಾರ್ವಾಲೆ ಹೆಚ್ಚಿನ ಕಂಪನಿಗಳು ಮಹಾಪೆಯ ಮಿಲೇನಿಯಂ ಬಿಜಿನೆಸ್ ಪಾರ್ಕ್ 2009-02-27 ವೇಬ್ಯಾಕ್ ಮೆಷಿನ್ ನಲ್ಲಿ. ಎಂದು ಕರೆಯುವ ಪ್ರದೇಶದಲ್ಲಿವೆ. ಧೀರ್ಘ ಕಾಲೀನ ಯೋಜನೆಯ ಭಾಗವಾಗಿ,ಪ್ರಮುಖ ಕಮಾಡಿಟಿ ಮಾರುಕಟ್ಟೆಯು ಮುಂಬಯಿ ನಗರದ ಹೃದಯ ಭಾಗದಿಂದ ಹೊಸ ಮುಂಬಯಿಗೆ ಸ್ಥಳ ಬದಲಾಯಿಸುತ್ತಿದೆ. ಕಲಾಂಬೋಲಿ (ಹೊಸ ಮುಂಬಯಿಯಲ್ಲಿನ ಇನ್ನೊಂದು ) ಪ್ರಮುಖ ಸ್ಟೀಲ್ ಮಾರುಕಟ್ಟೆಗೆ ಮನೆಯಾಗಿದೆ. ವಾಶಿ ತಾಜಾ ಹಣ್ಣು ಮತ್ತು ತರಕಾರಿ ಮಾರುಕಟ್ಟೆ. ಒಂದು ಪ್ರಮುಖ ವ್ಯಾಪಾರಿ ಹೆಗ್ಗುರುತು ನಾವಾ ಸೇನಾ - ದ್ರೋಣಗಿರಿ ಘಟಕದಲ್ಲಿನ ಜೆ‌ಎನ್‌ಪಿಟಿ ಹಡಗು ಬಂದರು (ಜವಾಹಾರಲಾಲ್ ನೆಹರು ಪೋರ್ಟ್ ಟ್ರಸ್ಟ್) . ನಗರದಲ್ಲಿನ ಮುಖ್ಯ ವ್ಯಾಪಾರಿ ಸ್ಥಳಗಳು ಸಿಬಿಡಿ ಬೆಲಾಪೂರ್,ವಾಶಿ,ನೆರೂಲ್ ಮತ್ತು ಮಹಾಪೆ. ಹೊಸ ಮುಂಬಯಿಯಲ್ಲಿ ಶೆರು ಹೂಡಿಕೆ ಬಹಳ ಪ್ರಸಿದ್ಧ, ಬಿಗ್‌ಬುಲ್ ಇನ್ವೆಸ್ಟ್‌ಮೆಂಟ್ಸ್, ಶೇರ್‌ಖಾನ್,ಇಂಡಿಯಾಬುಲ್ಸ್ ನಂತಹ ಕಂಪನಿಗಳಿಂದ ಇದು ಸಾಧ್ಯವಾಗಿದೆ. ವಾಶಿ ಮತ್ತು ಬೆಲಾಪೂರ್ ರೈಲು ನಿಲ್ದಾಣದ ಸಮುಚ್ಚಯವು ದ ಇಂಟರ್ನ್ಯಾಷನಲ್ ಇನ್ಫೋಟೆಕ್ ಪಾರ್ಕ್ ಹಲವಾರು ಐಟಿ ಕಂಪನಿಗಳಿಗೆ ಸ್ಥಳ ನೀಡಿದೆ. ಮಹಾಪೆ ಸಮೀಪದ ನ್ಯೂ ಮಿಲೇನಿಯಂ ಸಿಟಿ ಪ್ರಮುಖ ಜ್ಞಾನ ಕಾರಿಡಾರ್ ಭಾಗವಾಗಿ ರೂಪುಗೊಂಡು ಮುಂಬಯಿ ಮತ್ತು ಪುಣೆವರಿಗೂ ಹರಡಿದೆ. ರಿಲಯನ್ಸ್ ಇನ್ಫೋಕಾಮ್ ಮುಖ್ಯ ಕಛೇರಿ-ಧೀರೂಭಾಯಿ ಅಂಬಾನಿ ನಾಲೆಡ್ಜ್ ಸಿಟಿ ಕೋಪರ್ ಕೈರನೆ ನಿಲ್ದಾಣದ ಎದುರಿಗೆ ಇದೆ. ಇತರೆ ಐಟಿ ಕಂಪನಿಗಳಾ ಎಲ್&ಟಿ ಇನ್ಫೋಟೆಕ್, ವಿಪ್ರೋ ಲಿಮಿಟೆಡ್, ಸಿಎಂಸಿ, ಟಾಟಾ ಕನ್ಸಲ್ಟನ್ಸಿ ಸರ್ವೀಸಸ್, ಆಪ್ಟೆಕ್, ಟ್ರ್ಯಾಕ್ ಮೇಲ್, ಐಸಿಐಸಿಐ ಇನ್ಫೋಟೆಕ್ ಮತ್ತು ಪಿಸಿಎಸ್,ಒಳಗೊಂಡಿದೆ ಇವರುಗಳ ಕಛೇರಿಯು ಥಾನೆ ಬೆಲಾಪೂರ್ ರಸ್ತೆಯಲ್ಲಿದೆ. ಮುಖೇಶ್ ಅಂಬಾನಿ ಬೆಂಬಲಿಸಿದ ಹೊಸ ಮುಂಬಯಿ ವಿಶೇಷ ಆರ್ಥಿಕ ವಲಯ ( ಎಸ್‌ಇಝೆಡ್) ದ್ರೋಣಗಿರಿ ಮತ್ತು ಕಾಲಂಬೋಲಿಯ ಮುಖ್ಯ ಘಟಕಗಳಲ್ಲಿ ಹಬ್ಬಿದೆ ಹಾಗೆಯೇ ನಗರಕ್ಕೆ ದೊಡ್ಡ ವಾಣಿಜ್ಯ ಬೆಳವಣಿಗೆ ಮತ್ತು ಉದ್ಯೋಗ ಒದಗಿಸಿದೆ. (ಪ್ರಸ್ತಾವಿತ) ಹೊಸ ಮುಂಬಯಿ ವಿಮಾನ ನಿಲ್ದಾಣದ ಬಳಿಯಲ್ಲಿ ಸಾಗುವ, ಹೂಡಿಕೆ ಸುಮಾರು ೪೦,೦೦೦ ಕೋಟಿಗಳು ಇರುವ ಈ ಯೋಜನೆ ಕೂಡ ೨೧ನೇಯ ಶತಮಾನದ ನಗರ ಬೆಳವಣಿಗೆಗೆ ವೇಗವನ್ನು ನೀಡುತ್ತದೆ, ಹೊಸ ಮುಂಬಯಿ. ಮ್ಯಾರಥಾನ್ ಗ್ರುಪ್ ತನ್ನ ಪ್ರಗತಿಗೆ ಪ್ರಸ್ತಾವಿತ ವಿಮಾನ ನಿಲ್ದಾಣದ ಸಮೀಪ ನೆಕ್ಸ್‌ಝೋನ್ ಎಂದು ಕರೆಯಲಾಗುವ ಸಣ್ಣ ಎಸ್‌ಇಝೆಡ್ ಪ್ರಾರಂಭಿಸಿದೆ. ಈ ಎಸ್‌ಇಝೆಡ್ ವಿಶೇಷವಾಗಿ ಐಟಿ/ಐಇಎಸ್ ಉದ್ಯಮಗಳಿಗೆ ಮತ್ತು ರೆಸಿಡೆನ್ಶಿಯಲ್ ಮತ್ತು ವಾಣಿಜ್ಯ ಕಟ್ಟಡಗಳು,ಮನರಂಜನಾ ಮಾಲ್ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಕೂಡಿದ ಸಂಪೂರ್ಣ ಉಪನಗರವಾಗಬಹುದು. ಹೊಂಡಾ ಎಸ್‌ಇಐಎಲ್‌ನ ಮುಖ್ಯ ಕಛೇರಿ ನೆರೂಲ್ಎಂಐಡಿಸಿ ಎಂಬ ಸ್ಥಳದಲ್ಲಿದೆ. == ಕಾನೂನು ವ್ಯವಸ್ಥೆ == ನಗರವು ವರ್ಷಾಂತರಗಳ ಜನಸಂಖ್ಯೆ ಮತ್ತು ಏಳಿಗೆಯಿಂದಾಗಿ, ಹೆಚ್ಚು ಅಪರಾಧ ಚಟುವಟಿಕೆಗಳನ್ನು ಆಕರ್ಷಿಸುತ್ತಿದೆ. ಹೊಸ ಮುಂಬಯಿಯ ಅಪರಾಧಗಳ ಸಂಖ್ಯೆಯು ೨೦೦೩ರ ೨,೭೬೩ ರಿಂದ ೨೦೦೪ರಲ್ಲಿ ೩,೫೭೧ಕ್ಕೆ ಹೆಚ್ಚಳವಾಗಿದೆ . ಅಪರಾಧದ ದಿಢೀರ್ ಬೆಳವಣಿಗೆಗೆ ಮುಖ್ಯ ಕಾರಣಗಳೆಂದರೆ ಪೋಲಿಸ್ ತನಿಖೆಯಲ್ಲಿ ರಾಜಕಾರಣಿಗಳ ಅಡ್ಡಬರುವಿಕೆ ಮತ್ತು ಅಗತ್ಯವಾದ ಪೋಲಿಸರ ಸಂಖ್ಯೆ ಇಲ್ಲದಿರುವಿಕೆ. ಹೊಸ ಮುಂಬಯಿಯಾದ್ಯಂತ ಕೆಲವೇ ಪೋಲಿಸ್ ಚೌಕಿಗಳಿವೆ ಮತ್ತು ವಾಸ್ತವವಾಗಿ ಪೋಲಿಸ್ ಚೌಕಿಗಳು ಮತ್ತು ಟ್ರಾಫಿಕ್ ಪೋಲಿಸರು ಅಸ್ವಿತ್ವದಲ್ಲಿಲ್ಲ. ಹೊಸ ಮುಂಬಯಿಯಲ್ಲಿ ಅಪರಾಧವು ಸರ ಅಪಹರಣ,ಪಿಕ್‌ಪಾಕೇಟ್,ಸೆಲ್‌ಫೊನ್‌ಗಳ ಕಳವು ಒಳಗೊಂಡಿದೆ. ಈ ಅಪರಾಧಗಳು ಮುಖ್ಯವಾಗಿ ಜನ ವಿರಳವಾದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಇತ್ತೀಚೆಗೆ, ಹೊಸ ಮುಂಬಯಿ ಹಲವಾರು ವಾಹನ ಕಳವು ಗಳು ಮತ್ತು ಖಾಲಿಯಾಗಿರುವ ಮನೆಗಳ ಕನ್ನಹಾಕುವಿಕೆಗೆ ಸಾಕ್ಷಿಯಾಗಿದೆ . ಕೊಲೆ ಮತ್ತು ಬ್ಯಾಂಕ್ ಡಕಾಯಿತಿ,ಬೆಂಕಿ ಹಚ್ಚುವುದು ಅಪರೂಪ. ಮುಖ್ಯವಾಗಿ ಗಾನ್ಸೋಲಿ ಪ್ರದೇಶದಲ್ಲಿ ಗಲಭೆ ಮತ್ತು ಕೋಮುಗಲಭೆ ನಡೆಯುತ್ತವೆ. ಹತಾಶೆಗೊಂಡು ದೊಂಬಿಮಾಡಿದ ಸ್ಥಳೀಯ ಹಳ್ಳಿಗರು ನ್ಯಾಯಬದ್ಧವಾದ ಮುಗ್ಧ ನಿವಾಸಿಗಳನ್ನು ಹೊಡೆದ ಹಲವಾರು ಪ್ರಸಂಗಗಳಿವೆ . ನೆರೂಲ್ ಮುಖ್ಯವಾಗಿ ಸುಲಿಗೆಯಿಂದ ಪೀಡಿತವಾಗಿದೆ [೧] 2004-12-05 ವೇಬ್ಯಾಕ್ ಮೆಷಿನ್ ನಲ್ಲಿ.. ಟಾಫಿಕ್ ಪೋಲಿಸ್ ಇಲ್ಲದಿರುವಿಕೆ ಅಥವಾ ಸುರಕ್ಷತಾ ಕ್ಯಾಮರಾಗಳಿಲ್ಲದ ಕಾರಣದಿಂದ ಅಜಾಗರೂಕ ಟ್ರಕ್ ಚಾಲಕರು ಮತ್ತು ಮೋಟಾರ್ ಕಾರ್‌ಗಳು ವಿಶಾಲವಾದ ಪಾಮ್ ಬೀಚ್ ರಸ್ತೆಯಲ್ಲಿ ಆ‍ಯ್‌ಕ್ಸಿಡೆಂಟ್ ಮಾಡುವುದು ಅತ್ಯಂತ ಅಪಾಯಕರ ರೀತಿಯಲ್ಲಿ ಹೆಚ್ಚುತ್ತಿವೆ. ವಾಹನ ಚಾಲಕರಿಗೆ ಬೆಲಾಪೂರ್ ಮತ್ತು ಕಾರ್ಘರ್ ನಡುವೆ ಬೀದಿ ದೀಪಗಳ ಕೊರತೆಯಿಂದ ಕೂಡ ಅಪಾಯ ಮುಂದುವರೆಯುತ್ತವೆ. ಪೋಲೀಸರ ಸಂಖ್ಯೆ ಕಡಿಮೆ ಇರುವುದರಿಂದಾಗಿ ಅಂಗಡಿಗಳು ಮತ್ತು ಕಾಲನಿಗಳು ಕೆಲವೊಮ್ಮೆ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಬಾಡಿಗೆಗೆ ಗೊತ್ತುಪಡಿಸಿಕೊಳ್ಳುತ್ತವೆ.[೨] ವ್ಯಾಪಾರಗಳು ರಾತ್ರಿ ೧೦ ಗಂಟೆಗೆ ಮುಗಿಯುತ್ತವೆ. ಮುಂಬಯಿ ಭೂಗತ ಲೋಕ ಕೂಡ ನಗರವನ್ನು ಗಮನಿಸ ತೊಡಗಿದೆ [೩],ಸಮೃದ್ಧವಾದ ಕೇಬಲ್ ಆಪರೇಟರ್‌ಗಳು,ಬಿಲ್ಡರ‍್ಗಳು,ಮತ್ತು ರಿಯಲ್ ಎಸ್ಟೇಟ್ ಡೆವಲಪರುಗಳ ವ್ಯಾಪಾರದ ಸುಲಿಗೆಯ ಕಡೆ ಗುರಿಯಿಟ್ಟಿದೆ. ಒಟ್ಟಿನಲ್ಲಿ, ಹೊಸ ಮುಂಬಯಿಯಲ್ಲಿನ ಅಪರಾಧಗಳು ಇದರ ದೊಡ್ಡಣ್ಣ ಮುಂಬಯಿಗಿಂತ ತುಂಬಾ ಕಡಿಮೆ. ಇತ್ತೀಚೆಗೆ ಅಹಮದಾಬಾದ್ ಸರಣಿ ಸ್ಫೋಟದಲ್ಲಿ ಹೊಸ ಮುಂಬಯಿಯ ಪಾತ್ರವನ್ನು ಪ್ರಮುಖವಾಗಿ ಶಂಖಿಸಲಾಗಿದೆ. == ಕ್ರೀಡೆಗಳು == ಕ್ರಿಕೆಟ್ ನಗರದಲ್ಲಿ ಪ್ರಚಲಿತವಿರುವ ಕ್ರೀಡೆಯಾಗಿದೆ. ಹೊಸ ಮುಂಬಯಿ ನೆರೂಲ್‌ನಲ್ಲಿ ಡಿವೈ ಪಾಟೀಲ್ ಕ್ರೀಡಾಂಗಣ ಎಂದು ಕರೆಯಲಾಗುವ ಸ್ವಂತ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ಹೊಂದಿದ್ದು ೩ ಐಪಿಎಲ್ ಟಿ-೨೦ ಮ್ಯಾಚುಗಳು ಮತ್ತು ಐಪಿಎಲ್ ಟಿ-೨೦ ಅಂತಿಮ ಕ್ರಿಕೆಟ್ ಪಂದ್ಯಕ್ಕೆ ಆತಿಥೇಯ ನೀಡಿತ್ತು. ಭಾರತದಲ್ಲಿರುವ ಒಂದು ಉತ್ತಮ ಕ್ರೀಡಾಂಗಣವಾಗಿದೆ ಎಂದು ಇದು ಹೇಳುತ್ತದೆ. ಪುಟ್ಬಾಲ್ ಎರಡನೇಯ ಅತಿ ಜನಪ್ರಿಯ ಕ್ರೀಡೆಯಾಗಿದ್ದು ಮಾನ್ಸೂನ್ ಸಯದದಲ್ಲಿ ಸಿಟಿ ಕ್ಲಬ್‌ಗಳು ಆಟವಾಡುತ್ತವೆ ,ಆವಾಗ ಯಾವುದೇ ಹೊರಾಂಗಣ ಕ್ರೀಡೆಯನ್ನು ಆಡಲಾಗುುದಿಲ್ಲ. ಮುಂಬಯಿಯಲ್ಲಿ ಫೀಫಾ ವಿಶ್ವ ಕಪ್ಹೆಚ್ಚು ವಿಕ್ಷೀಸಿದ ಟಿವಿ ಘಟನೆಯಾಗಿದೆ. ಭಾರತದ ರಾಷ್ಟ್ರೀಯ ಕ್ರೀಡೆ, ಹಾಕಿ ಕ್ಷೇತ್ರ,ಇತ್ತೀಚಿನ ವರ್ಷಗಳಲ್ಲಿ ಶೀಘ್ರವಾಗಿ ಅವನತಿಯತ್ತ ಸಾಗುತ್ತಿದೆ, ಕ್ರಿಕೆಟಿಗಿರುವ ಜನಪ್ರಿಯೆತೆ ಇದಕ್ಕಿಲ್ಲದಿರುವುದೆ,ಹಾಗಿದ್ದಾಗ್ಯೂ ಮುಂಬಯಿಯ ಹಲವಾರು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಆಟವಾಡುತ್ತಾರೆ. ಹೊಸ ಮುಂಬಯಿಯ ನೆರೂಲ್‌ನಲ್ಲಿ ಒಲಂಪಿಕ್ ಗಾತ್ರದ ಈಜುಕೊಳ ಹೊಂದಿದೆ. ಸಿಡ್ಕೊ ನೆರೂಲ್ & ಕಾರ್ಘರ್‌ನಲ್ಲಿ ೧೮ ಕುಳಿಯಿರುವ ಎರಡು ಗಾಲ್ಫ್ ಕೋರ್ಸ್ ಅಕಾಡೆಮಿಗೆ ಪ್ರಸ್ತಾಪವಿಟ್ಟಿದೆ. ಕಾರ್ಘರ್‌ನಲ್ಲಿ ಕ್ರೀಡಾ ಸೌಲಭ್ಯಗಳನ್ನು ಒದಗಿಸಲು ೮೦ ಹೆಕ್ಟೇರ್ ಸೆಂಟ್ರಲ್ ಪಾರ್ಕ್ ಅಭಿವೃದ್ಧಿ ಪಡಿಸಲು ಪ್ರಸ್ತಾಪವಿಡಲಾಗಿದೆ. ೨೦೧೦ರ ಮಧ್ಯದಲ್ಲಿ ಈ ಪಾರ್ಕ್ ಉದ್ಘಾಟನೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ರತಿ ವರ್ಷ ಹೊಸ ಮುಂಬಯಿ ಒಲಂಪಿಕ್ಸ್ 2009-04-17 ವೇಬ್ಯಾಕ್ ಮೆಷಿನ್ ನಲ್ಲಿ. ಜರುಗುತ್ತದೆ. ೨೦೦೮ರ ಒಲಂಪಿಕ್ಸ್‌ನಲ್ಲಿ ೧೨ ಒಳಗೊಂಡು ೩೫೦೦ ಕ್ಕಿಂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ವಾಶಿ ವೈಕಿಂಗ್ಸ್ ಗೆದ್ದರು ಮತ್ತು ನೆರುಲ್ ನಿಂಜಾಸ್ ಎರಡನೆಯವರಾಗಿ ಬಂದರು. ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ ಇತರೆ ತಂಡಗಳು ಕೋಪರ್ ಕೈರನೆ ಕಿಂಗ್ಸ್,ಏರೀಲಿ ಏಸಸ್,ಪನ್ವೇಲ್ ಪೆಟ್ರಿಯಾಟ್ಸ್,ಬೆಲಾಪೂರ್ ಬ್ಲೆಜರ್ಸ್,ಕಾಲಂಬೋಲಿ ನಾಕ್‌ಔಟ್ಸ್,ಮತ್ತು ಕಾರ್ಘರ್ ನೈಟ್ಸ್. == ಸೋದರ-ನಗರಗಳು == ಹೊಸ ಮುಂಬಯಿ ಹಲವಾರು ಸೋದರಿ ನಗರಗಳನ್ನು ಹೊಂದಿದೆ: ಕರಾಕಾಸ್, ವೆನೆಜುವೆಲಾ. ಬೊಗೊಟಾ, ಕೊಲಂಬಿಯಾ ಕ್ಲುಜ್-ನಪೊಕಾ, ರೋಮೆನಿಯಾ ದಮಾಸ್ಕಸ್, ಸಿರಿಯಾ ಹವಾನ್, ಕ್ಯೂಬಾ [59]ಇಸ್ತಾನ್‌ಬುಲ್, ಟರ್ಕಿ [186] ಟೆಹ್ರಾನ್‌, ಇರಾನ್‌ ಜಕಾರ್ತಾ, ಇಂಡೋನೆಶಿಯಾ ಕುವೈತ್ ನಗರ, ಕುವೈತ್ == ಬಾಹ್ಯ ಕೊಂಡಿಗಳು == ವಿಕಿಟ್ರಾವೆಲ್ ನಲ್ಲಿ ನವೀ ಮುಂಬಯಿ ಪ್ರವಾಸ ಕೈಪಿಡಿ (ಆಂಗ್ಲ) ಹೊಸ ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ 2016-09-16 ವೇಬ್ಯಾಕ್ ಮೆಷಿನ್ ನಲ್ಲಿ. ಎನ್‌ಎಂಎಂಟಿಯ ಅಧೀಕೃತ ಜಾಲತಾಣ ಸಿಡ್ಕೊ - ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ 2013-06-28 ವೇಬ್ಯಾಕ್ ಮೆಷಿನ್ ನಲ್ಲಿ. == ಆಕರಗಳು ==